ದೇಶದ ಶತ್ರುವಾಗಿರುವ ಮಹಮದ್ ಅಲಿ ಜಿನ್ನಾ ಗೆ ಎಲ್ಲೂ ಸ್ಥಾನವಿಲ್ಲ: ಉತ್ತರ ಪ್ರದೇಶ ಡಿಸಿಎಂ

ಜಿನ್ನಾ ದೇಶದ ಶತ್ರು, ದೇಶದ ಶತ್ರವಿಗೆ ಯಾರ ಹೃದಯದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ ಜಾಗವಿಲ್ಲ ಎಂದು ಹೇಳಿದ್ದಾರೆ,...
ಕೇಶವ ಪ್ರಸಾದ್ ಮೌರ್ಯ
ಕೇಶವ ಪ್ರಸಾದ್ ಮೌರ್ಯ
ಕಾನ್ಪುರ್: ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್‌ ಅಲಿ ಜಿನ್ನಾ ಭಾವಚಿತ್ರವನ್ನು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ತೂಗು ಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ  ಉತ್ತರ ಪ್ರದೇಶ ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಜಿನ್ನಾ ದೇಶದ ಶತ್ರು ಎಂದಿದ್ದಾರೆ.
ಜಿನ್ನಾ ದೇಶದ ಶತ್ರು, ದೇಶದ ಶತ್ರವಿಗೆ ಯಾರ ಹೃದಯದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ ಜಾಗವಿಲ್ಲ  ಎಂದು ಹೇಳಿದ್ದಾರೆ,
ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿರುವ ಪಾಕಿಸ್ತಾನದ ಜನಕ ಮೊಹಮ್ಮದ್‌ ಅಲಿ ಜಿನ್ನಾ ಭಾವಚಿತ್ರ ಇರುವುದಕ್ಕೆ ಬಿಜೆಪಿ ಸಂಸದ ಸತೀಶ್‌ ಗೌತಮ್‌ ಆಕ್ಷೇಪ ವ್ಯಕ್ತ ಪಡಿಸಿದ್ದರು, ಹಿಂದೂ-ಮುಸ್ಲಿಮರ ನಡುವೆ ದ್ವೇಷ ಬಿತ್ತಿ ಪಾಕಿಸ್ತಾನದ ಹುಟ್ಟಿಗೆ ಕಾರಣವಾದ ಜಿನ್ನಾ ಅವರ ಫೋಟೊವನ್ನು ಏಕೆ ವಿವಿಯಲ್ಲಿ ಹಾಕಲಾಗಿದೆ. ಅದನ್ನೇಕೆ ಕಿತ್ತುಹಾಕಬಾರದು,'' ಎಂದು ಗೌತಮ್‌ ಪತ್ರ ಬರೆದಿದ್ದರು.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಸಿಎಂ ಯೋಗಿ ಆದಿತ್ಯನಾಥ್ ಭಾರತದ ವಿಭಜನೆಯ ಹಿಂದೆ ಇದ್ದ ವ್ಯಕ್ತಿಗೆ ಇಲ್ಲಿ ಯಾವುದೇ ರೀತಿಯ ಗೌರವ ಇಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com