ಪ್ರಧಾನಿಯ ಕದನ ವಿರಾಮ ನಡೆಗೆ ಪಾಕಿಸ್ತಾನ ಸ್ಪಂದಿಸದಿರುವುದು ವಿಷಾದನೀಯ: ಮೆಹಬೂಬಾ ಮುಫ್ತಿ

ಜಮ್ಮು-ಕಾಶ್ಮೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರಧಾನಿಯ ಕದನ ವಿರಾಮ ನಡೆಗೆ
ಪ್ರಧಾನಿಯ ಕದನ ವಿರಾಮ ನಡೆಗೆ ಪಾಕಿಸ್ತಾನ ಸ್ಪಂದಿಸದಿರುವುದು ವಿಷಾದನೀಯ: ಮೆಹಬೂಬಾ ಮುಫ್ತಿ
ಪ್ರಧಾನಿಯ ಕದನ ವಿರಾಮ ನಡೆಗೆ ಪಾಕಿಸ್ತಾನ ಸ್ಪಂದಿಸದಿರುವುದು ವಿಷಾದನೀಯ: ಮೆಹಬೂಬಾ ಮುಫ್ತಿ
Updated on
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರಧಾನಿಯ ಕದನ ವಿರಾಮ ನಡೆಗೆ ಪಾಕಿಸ್ತಾನ ಸ್ಪಂದಿಸದೇ ಇರುವುದು ವಿಷಾದನೀಯ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. 
ರಂಜಾನ್ ವೇಳೆಯಲ್ಲಿ ಕದನ ವಿರಾಮ ಹಾಕುವುದಕ್ಕೆ ವಿಶಾಲ ಹೃದಯವಿರಬೇಕಾಗುತ್ತದೆ. ನೀವು ನಮ್ಮ ಜನರ ನೋವನ್ನು ಮರೆಸುವ ನಿರ್ಧಾರ ಕೈಗೊಂಡಿದ್ದೀರಿ, ನಿಮ್ಮ ಒಂದು ಸಕಾರಾತ್ಮಕ ನಿರ್ಧಾರಕ್ಕೆ ನಾವು 10 ಸಕಾರಾತ್ಮಕ ನಿರ್ಧಾರ ಕೈಗೊಂಡು ಬೆಂಬಲ ಸೂಚಿಸುತ್ತೇವೆ, ನಿಮ್ಮ ಸಕಾರಾತ್ಮಕ ನಡೆಯನ್ನು ಪಾಕಿಸ್ತಾನ ಗುರುತಿಸದೇ ಇರುವುದು ವಿಷಾದನೀಯ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. 
ಕಿಶನ್ ಗಂಗಾ ಜಲವಿದ್ಯುತ್ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮೆಹಬೂಬಾ ಮುಫ್ತಿ ಭಾಗಿಯಾಗಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com