ಕಥುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳ ಪರವಾಗಿ ರ್ಯಾಲಿ ಹಮ್ಮಿಕೊಂಡು ಅತ್ಯಾಚಾರದ ಆರೋಪಿಗಳಿಗೆ ಬೆಂಬಲ ನೀಡಿರುವ ಆರೋಪ ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಮಾಜಿ ಸಚಿವರು ಕಥುವಾ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಪಟ್ಟು ಹಿಡಿದಿದ್ದು ಮೇ.20 ರಂದು ಸಿಬಿಐ ತನಿಖೆ ಎದುರಿಸುವುದಕ್ಕೂ ಮುನ್ನ ಕಥುವಾ ಜಿಲ್ಲೆಯಲ್ಲಿ ಬರಿಗಾಲಲ್ಲಿ ನಡೆದು ತನಿಖೆಗೆ ಆಗ್ರಹಿಸಿದ್ದಾರೆ.