ಜಮ್ಮು ಕಾಶ್ಮೀರ: ಸೇನಾ ಪಡೆ ಎನ್ ಕೌಂಟರ್ ಗೆ ನಾಲ್ವರು ಭಯೋತ್ಪಾದಕರು ಬಲಿ

ಜಮ್ಮು ಕಾಶ್ಮೀರದ ಕುಪ್ವಾರ ಪ್ರದೇಶದಲ್ಲಿ ಶುಕ್ರವಾರ ನಡೆದ ಭದ್ರತಾ ಪಡೆ ಹಾಗೂ ಉಗ್ರರ ನಡುವಿನ ಕಾಳಗದಲ್ಲಿ ಕನಿಷ್ಠ ನಾಲ್ಕು ಭಯೋತ್ಪಾದಕರು.......
ಜಮ್ಮು ಕಾಶ್ಮೀರ: ಸೇನಾ ಪಡೆ ಎನ್ ಕೌಂಟರ್ ಗೆ ನಾಲ್ವರು ಭಯೋತ್ಪಾದಕರು ಬಲಿ
ಜಮ್ಮು ಕಾಶ್ಮೀರ: ಸೇನಾ ಪಡೆ ಎನ್ ಕೌಂಟರ್ ಗೆ ನಾಲ್ವರು ಭಯೋತ್ಪಾದಕರು ಬಲಿ
ಕುಪ್ವಾರಾ(ಜಮ್ಮು ಕಾಶ್ಮೀರ): ಜಮ್ಮು ಕಾಶ್ಮೀರದ ಕುಪ್ವಾರ ಪ್ರದೇಶದಲ್ಲಿ ಶುಕ್ರವಾರ ನಡೆದ ಭದ್ರತಾ ಪಡೆ ಹಾಗೂ ಉಗ್ರರ ನಡುವಿನ ಕಾಳಗದಲ್ಲಿ ಕನಿಷ್ಠ ನಾಲ್ಕು ಭಯೋತ್ಪಾದಕರು ಸೇನೆಯ ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ.
ಉತ್ತರ ಕಾಶ್ಮೀರದ ಹಂದ್ವಾರಾ ಪ್ರದೇಶದ ಹಾಫ್ರುದಾ ಅರಣ್ಯದಲ್ಲಿ ಈ ಎನ್ ಕೌಂಟರ್ ನಡೆದಿದೆ.
ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ ಭಯೋತ್ಪಾದಕರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಮೇ 18ರಂದು ಪಾಕ್ ಗಡಿಯಲ್ಲಿ ಸಂಭವಿಸಿದ ಕದನ ವಿರಾಮ ಉಲ್ಲಂಘನೆಯಲ್ಲಿ ಇಬ್ಬರು ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಇದಾಗಿ ಮರು ದಿನ ಈ ಎನ್ ಕೌಂಟರ್ ನಡೆದಿದೆ.
ಆರ್.ಎಸ್. ಪುರ ಬಳಿ ಗಡಿ ನಿಯಂತ್ರಣ ರೇಖೆ ಸಮೀಪದಲ್ಲಿ ಪಾಕ್ ನಡೆಸಿದ ಗುಂಡಿನ ದಾಳಿಗೆ ಗಡಿ ಭದ್ರತಾ ಪಡೆ ಯೋಧರಾದ ಸೀತಾರಾಮ ಉಪಾದ್ಯ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com