ಛತ್ತೀಸ್ ಗಢ: ನಕ್ಸಲೀಯರ ಬಾಂಬ್ ಸ್ಫೋಟಕ್ಕೆ ಅಧಿಕಾರಿ ಹುತಾತ್ಮ, ಯೋಧನಿಗೆ ಗಾಯ

ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯ ರಾಯ್ಪುರದಲ್ಲಿ ನಕ್ಸಲೀಯರು ಇರಿಸಿದ್ದ ಪ್ರಬಲ ಬಾಂಬ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯ್ಪುರ: ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯ ರಾಯ್ಪುರದಲ್ಲಿ ನಕ್ಸಲೀಯರು ಇರಿಸಿದ್ದ ಪ್ರಬಲ ಬಾಂಬ್ ಸ್ಫೋಟಗೊಂಡು ಕೇಂದ್ರ ಮೀಸಲು ಪೊಲೀಸ್ ಪಡೆಯ(ಸಿಆರ್ ಪಿಎಫ್) ಎಲೈಟ್ ಕೊಬ್ರ ಘಟಕದ ಅಧಿಕಾರಿ ಮೃತಪಟ್ಟಿದ್ದು, ಮತ್ತೊಬ್ಬ ಜವಾನ ಗಾಯಗೊಂಡಿದ್ದಾರೆ.

ಇಂದು ಬೆಳಗ್ಗೆ ಸುಮಾರು 7.45ರ ಸುಮಾರಿಗೆ ಪುಸ್ವಾಡ ಗ್ರಾಮದ ಅರಣ್ಯ ಪ್ರದೇಶದಲ್ಲಿ 206ನೇ ಕೋಬ್ರಾ ಪಡೆಯ ಬೆಟ್ಟಾಲಿಯನ್ ನ್ನು ನಕ್ಸಲೀಯರು ಹತ್ಯೆಗೈದಿದ್ದಾರು. ಇವರು ಇಂದು ಬೆಳಗ್ಗೆ ಗಸ್ತು ತಿರುಗುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕೊಬ್ರಾ 206ನೇ ಬೆಟಾಲಿಯನ್ ಗೆ ಸೇರಿದ ಸಬ್ ಇನ್ಸ್ ಪೆಕ್ಟರ್ ರಾಜೇಶ್ ಕುಮಾರ್ ಅವರನ್ನು ನಕ್ಸಲೀಯರು ಸ್ಫೋಟದಲ್ಲಿ ಹತ್ಯೆಗೈದಿದ್ದಾರೆ. ಇದೇ ಘಟಕದ ಕಾನ್ಸ್ಟೇಬಲ್ ಮನಿಕ್ ತಿನ್ಪರೆ ಗಾಯಗಳಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com