ಕಳೆದ ಮಂಗಳವಾರ ಈ ಘಟನೆ ನಡೆದಿದ್ದು ರಾಮನಗರ್ ನಿಂದ 14-15 ಕಿ.ಮೀ ದೂರದಲ್ಲಿರುವ ಗಿರಿಜಾ ದೇವಿ ದೇವಸ್ಥಾನದ ಸಮೀಪ ಹಿಂದೂ ಹುಡುಗಿಯೊಡನೆ "ಲೈಂಗಿಕ ಭಂಗಿಯಲ್ಲಿ ಇದ್ದ'' ಎನ್ನಲಾದ ಮುಸ್ಲಿಂ ಯುವಕನನ್ನು ಉದ್ರಿಕ್ತ ಗುಂಪು ಥಳಿಸಿ ಸಾಯಿಸಲು ಮುಂದಾಗಿತ್ತು. ಆಗ ಅಲ್ಲಿಗಾಗಮಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಗನ್ದೀಪ್ ಸಿಂಗ್ ಜನರ ಗುಂಪಿನಿಂದ ಆ ಯುವ ಜೊಡಿಯನ್ನು ಪಾರು ಮಾಡಿದ್ದಾರೆ.