13 ಸಾವಿನ ನಂತರ ಲಂಡನ್‌ ಷೇರು ಮಾರುಕಟ್ಟೆಯಿಂದ ವೇದಾಂತ ಡೀಲಿಸ್ಟ್ ಗೆ ಯುಕೆ ಪ್ರತಿಪಕ್ಷ ಆಗ್ರಹ

ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಕಂಪೆನಿ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ 13 ಅಮಾಯಕ...
ಪ್ರತಿಭಟನಾಕಾರರು
ಪ್ರತಿಭಟನಾಕಾರರು
Updated on
ಲಂಡನ್‌: ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಕಂಪೆನಿ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ 13 ಅಮಾಯಕ ಜೀವಗಳು ಬಲಿಯಾಗಿದ್ದು, ವೇದಾಂತ ಕಂಪೆನಿಯನ್ನು ಲಂಡನ್‌ ಷೇರು ಮಾರುಕಟ್ಟೆಯಿಂದ ತೆಗೆದು ಹಾಕಬೇಕು(ಡೀಲಿಸ್ಟ್‌) ಎಂದು ಬ್ರಿಟನ್‌ ನ ಪ್ರತಿಪಕ್ಷ ಲೇಬರ್‌ ಪಾರ್ಟಿ ಒತ್ತಾಯಿಸಿದೆ.
ಕಳೆದ ಹಲವು ವರ್ಷಗಳಿಂದ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಈ ಪುಂಡು ಕಂಪೆನಿಯಿಂದ(ವೇದಾಂತ) ಲಂಡನ್‌ ಹಣಕಾಸು ಮಾರುಕಟ್ಟೆಯ ಪ್ರತಿಷ್ಠೆಗೆ ಆಗುವ ಹಾನಿಯನ್ನು ತಡೆಯಲು ಅದನ್ನು ಷೇರು ಮಾರುಕಟ್ಟೆಯ ವಹಿವಾಟು ಪಟ್ಟಿಯಿಂದ ಕಿತ್ತು ಹಾಕುವುದೇ ಉತ್ತಮ ಎಂದು ಬ್ರಿಟನ್ ನ ಛಾಯಾ ಚಾನ್ಸ್ ಲರ್‌ ಜಾನ್‌ ಮೆಕ್ ಡೊನೆಲ್‌ ಅವರು ಹೇಳಿದ್ದಾರೆ.
ಈ ವಾರ ನಡೆದ ಪ್ರತಿಭಟನಾಕಾರರ ಹತ್ಯಾಕಾಂಡದ ನಂತರ ನಿಯಂತ್ರಕರು ಕಂಪನಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ವೇದಾಂತ ಅನ್ನು ಈ ಕೂಡಲೇ ಡೀಲಿಸ್ಟ್ ಮಾಡಬೇಕು. ಈ ಮೂಲಕ ಷೇರು ಮಾರುಕಟ್ಟೆ ಆಡಳಿತದ ವಿಶ್ವಾಸವನ್ನು ಪುನಃಸ್ಥಾಪಿಸಬೇಕು ಎಂದು ಜಾನ್ ಆಗ್ರಹಿಸಿದ್ದಾರೆ.
ಕಳೆದ ಮಂಗಳವಾರ ತುತುಕುಡಿಯ ವೇದಾಂತ ಕಂಪನಿಯ ಸ್ಟರ್ಲೈಟ್ ವಿರುದ್ಧ ನಡೆದಿದ್ದ ಹಿಂಸಾಚಾರದಲ್ಲಿ 13 ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com