ನವದೆಹಲಿ: ನೋಟಿನ ಮೇಲೆ ಮಹಾತ್ಮ ಗಾಂಧೀಜಿ ಅವರ ಚಿತ್ರದ ಬದಲಿಗೆ ಸಮಾಜ ಸುಧಾರಕ ವೀರ ಸಾವರ್ಕರ್ ಅವರ ಭಾವಚಿತ್ರ ಮುದ್ರಿಸುವಂತೆ ‘ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ.
ವೀರ ಸಾವರ್ಕರ್ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ಆಗ್ರಹಿಸಿದ್ದಾರೆ
.
ಭಾರತ ಸ್ವಾತಂತ್ರ್ಯ ಪಡೆಯಲು ವೀರ ಸಾವರ್ಕರ್ ಅವರು ಮಹತ್ತರವಾದ ಪಾತ್ರ ನಿರ್ವಹಿಸಿದ್ದಾರೆ. ಹೀಗಾಗಿ ಅವರಿಗೆ ಗೌರವ ಸೂಚಿಸುವ ಸಲುವಾಗಿ ಭಾರತೀಯ ನೋಟುಗಳ ಮೇಲೆ ಸಾವರ್ಕರ್ ಚಿತ್ರ ಮುದ್ರಿಸಬೇಕು ಎಂದು ಮಹಾಸಭಾ ಬೇಡಿಕೆ ಇಟ್ಟಿದೆ.
ಭಾರತದಲ್ಲಿ ‘ಹಿಂದುತ್ವ’ ಎಂಬ ಕಲ್ಪನೆಯನ್ನು ಪರಿಪಕ್ವಗೊಳಿಸಿದವರು ವಿನಾಯಕ್ ದಾಮೋದರ್ ಸಾವರ್ಕರ್ ಎಂದು ಹೇಳಿದೆ.