ಚುನಾವಣೆ ಹತ್ತಿರವಿದ್ದಾಗ ಮಾತ್ರ ಬಿಜೆಪಿಗೆ ರಾಮನ ನೆನಪು : ಕಾಂಗ್ರೆಸ್

ಚುನಾವಣೆ ಸಮೀಪಿಸುತ್ತಿದ್ದಂತೆ ಮಾತ್ರ ಬಿಜೆಪಿಗೆ ರಾಮ ಮಂದಿರ ವಿವಾದ ನೆನಪಾಗುತ್ತದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವ ದೆಹಲಿ: ಚುನಾವಣೆ ಸಮೀಪಿಸುತ್ತಿದ್ದಂತೆ  ಮಾತ್ರ  ಬಿಜೆಪಿಗೆ ರಾಮ ಮಂದಿರ ವಿವಾದ ನೆನಪಾಗುತ್ತದೆ ಎಂದು ಹೇಳುವ ಮೂಲಕ ಕಾಂಗ್ರೆಸ್  ಮುಖಂಡ ರಾಜೀವ್ ಶುಕ್ಲಾ  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾಗಿರುವ ರಾಜೀವ್ ಶುಕ್ಲಾ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದವರಿಗೆ ರಾಮನಲ್ಲಿ ನಂಬಿಕೆ ಇಲ್ಲ. ರಾಮನಿಗಾಗಿ ಏನೂ ಕೂಡಾ ಮಾಡಲ್ಲ. ಆದರೆ. ಚುನಾವಣೆ ಸಂದರ್ಭದಲ್ಲಿ ಆತನ ಹೆಸರಿನಲ್ಲಿ ಮತಗಳನ್ನು ಪಡೆದುಕೊಳ್ಳುತ್ತಾರೆ .ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ನಿಲುವಿಗೆ ಕಾಂಗ್ರೆಸ್ ಬದ್ಧವಾಗಿರುವುದಾಗಿ ತಿಳಿಸಿದರು.

ರಾಫೆಲ್  ಯುದ್ಧ ವಿಮಾನ ಖರೀದಿ  ಒಪ್ಪಂದಕ್ಕೆ ಸಂಬಂಧಿಸಿದ ಮಾಹಿತಿಯನ್ನು  ಸುಪ್ರೀಂಕೋರ್ಟ್ ಹಾಗೂ ಸಂಸತ್ತಿಗೆ  ಕೇಂದ್ರ ಸರ್ಕಾರ ಒದಗಿಸದೆ ಮುಚ್ಚಿಡುತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಮಾಹಿತಿಯನೆಲ್ಲಾ ಮುಚ್ಚಿಡುತ್ತಿದೆ . ಸುಪ್ರೀಂಕೋರ್ಟ್  ರಾಫೆಲ್ ಯುದ್ದ ವಿಮಾನ ಖರೀದಿ ಸಂಬಂಧ ಮಾಹಿತಿ ಕೇಳಿದರೆ ಎಂತಹ ವಿಧದ ಭ್ರಷ್ಟಾಚಾರ ಮುಕ್ತ ಭಾರತದ ಮಾಹಿತಿ ನೀಡುತ್ತಾರೆ ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com