ಗಸ್ತು ಮುಗಿಸಿದ ಐಎನ್ಎಸ್ ಅರಿಹಂತ್, ಇನ್ನು ಮುಂದೆ ಪರಮಾಣು ಬೆದರಿಕೆ ಇಲ್ಲ ಎಂದ ಪ್ರಧಾನಿ

ಗಸ್ತು ಪೂರ್ಣಗೊಳಿಸಿದ ದೇಶೀಯ ಪರಮಾಣುಚಾಲಿತ ಜಲಾಂತರ್ಗಾಮಿ ಐಎನ್ಎಸ್ ಅರಿಹಂತ್ ಸಿಬ್ಬಂದಿಯನ್ನ...
ಐಎನ್ ಎಸ್ ಅರಿಹಂತ್
ಐಎನ್ ಎಸ್ ಅರಿಹಂತ್
ನವದೆಹಲಿ: ತನ್ನ ಪ್ರಥಮ ಭೀತಿಕಾರಕ ಗಸ್ತನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ದೇಶೀಯ ಪರಮಾಣುಚಾಲಿತ ಜಲಾಂತರ್ಗಾಮಿ ಐಎನ್ಎಸ್ ಅರಿಹಂತ್ ಸಿಬ್ಬಂದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ  ಶ್ಲಾಘಿಸಿದ್ದಾರೆ.
ದೇಶದ ರಕ್ಷಣೆಯಲ್ಲಿ, ವಿರೋಧಿಗಳನ್ನ ನಾಶ ಮಾಡುವ ಶಕ್ತಿಶಾಲಿ ಐಎನ್ಎಸ್ ಅರಿಹಂತ್ ತನ್ನ ಕಾರ್ಯವನ್ನು ಪೂರ್ಣಗೊಳಿಸಿ ವಾಪಸ್​ ಬಂದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ದೇಶದ ರಕ್ಷಣೆಗೆ ಈ ನೌಕೆ ದೇಶದ ಆಸ್ತಿ ಎಂದರು.
ನಮ್ಮ ರಾಷ್ಟ್ರದ ರಕ್ಷಣೆ ಅಥವಾ ಭದ್ರತೆಯನ್ನ ಹೆಚ್ಚು ಮಾಡುವ ಪ್ರಕ್ರಿಯೆಯಲ್ಲಿ ಐಎನ್​ಎಸ್​ ಅರಿಹಂತ್ ಮೊದಲ ಹೆಜ್ಜೆಯಾಗಿದೆ.  ಅರಿಹಂತ್ ಗಸ್ತು ಪೂರ್ಣಗೊಳಿಸುವ ಮೂಲಕ ನಮ್ಮ ರಾಷ್ಟ್ರದ ವೈರಿಗಳಿಗೆ ಬಹಿರಂಗ ಸವಾಲು ಹಾಕಿದೆ ಎಂದು ಹೇಳಿದರು.
ಇನ್ನು ಮುಂದೆ ಯಾರೂ ನಮಗೆ ಪರಮಾಣು ಬೆದರಿಕೆ ಹಾಕುವುದಿಲ್ಲ. ಪರಮಾಣು ಬಾಂಬ್​ ಹಾಕುವ ಬೆದರಿಕೆ ಹಾಕುವವರಿಗೆ ಅರಿಹಂತ್​ ಹಂತ ಸ್ಪಷ್ಟ ಉತ್ತರವಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ದೀಪಾವಳಿಗೂ ಮುನ್ನ ಈ ಸಾಧನೆ ಮಾಡಿದ ಭಾರತೀಯ ನೌಕಾಪಡೆಯನ್ನು ಧನ್‌ತೇರಾ ಸ್ಪೆಷಲ್‌ ಎಂದು ವರ್ಣಿಸಿರುವ ಪ್ರಧಾನಿ ಮೋದಿ, "ಇದು ಭಾರತದ ಹೆಮ್ಮೆ, ಇದರ ಯಶಸ್ಸಿಗೆ ಕಾರಣರಾದವರಿಗೆಲ್ಲ ನನ್ನ ಅಭಿನಂದನೆಗಳು. ಇತಿಹಾಸದಲ್ಲಿ ಇದು ಸದಾ ಸ್ಮರಣೀಯವಾಗಿರುತ್ತದೆ' ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com