ಇದೇ ವೇಳೆ ವಾಲ್ಮೀಕಿ ಸಮುದಯಾದ ಮತಗಳನ್ನು ಕ್ರೋಡಿಕರಿಸಲು ಹೋಗಿ ಬಿಜೆಪಿ ರೂಪಿಸಿದ್ದ ತಂತ್ರ ಪಕ್ಷಕ್ಕೆ ಮುಳುವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಬಿಜೆಪಿ ನಾಯಕರು ರೆಡ್ಡಿ ರನ್ನು ಸಮರ್ಥಿಸಿಕೊಂಡಿದ್ದು, ರೆಡ್ಡಿ ಹೇಳಿಕೆಯಿಂದ ಪಕ್ಷಕ್ಕೆ ಯಾವುದೇ ಹಿನ್ನಡೆಯುಂಟಾಗಿಲ್ಲ ಎಂದು ಹೇಳಿದ್ದಾರೆ.