ತೆಲಂಗಾಣ: ಟಿಆರ್ ಎಸ್ ನಾಯಕನನ್ನು ಕಲ್ಲು ಹೊಡೆದು ಕೊಂದ ದುಷ್ಕರ್ಮಿಗಳು!

ತೆಲಂಗಾಣ ರಾಷ್ಟರ ಸಮಿತಿ (ಟಿಆರ್ ಎಸ್) ನಾಯಕ ನಾರಾಯಣ ರೆಡ್ಡಿ ಎನ್ನುವವರನ್ನು ದುಷ್ಕರ್ಮಿಗಳು ಕಲ್ಲು ಹೊಡೆದು ಹತ್ಯೆ ಮಾಡಿರುವ ಘಟನೆ ತೆಲಂಗಾಣ ವಿಕಾರಾಬಾದ್ ಜಿಲ್ಲೆಯ ಸುಲ್ತಾನ್ ಪುರ್......
ತೆಲಂಗಾಣ: ಟಿಆರ್ ಎಸ್ ನಾಯಕನನ್ನು ಕಲ್ಲು ಹೊಡೆದು ಕೊಂದ ದುಷ್ಕರ್ಮಿಗಳು!
ತೆಲಂಗಾಣ: ಟಿಆರ್ ಎಸ್ ನಾಯಕನನ್ನು ಕಲ್ಲು ಹೊಡೆದು ಕೊಂದ ದುಷ್ಕರ್ಮಿಗಳು!
Updated on
ಹೈದರಾಬಾದ್: ತೆಲಂಗಾಣ ರಾಷ್ಟ ಸಮಿತಿ (ಟಿಆರ್ ಎಸ್) ನಾಯಕ ನಾರಾಯಣ ರೆಡ್ಡಿ ಎನ್ನುವವರನ್ನು ದುಷ್ಕರ್ಮಿಗಳು ಕಲ್ಲು ಹೊಡೆದು ಹತ್ಯೆ ಮಾಡಿರುವ ಘಟನೆ ತೆಲಂಗಾಣ ವಿಕಾರಾಬಾದ್ ಜಿಲ್ಲೆಯ ಸುಲ್ತಾನ್ ಪುರ್ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಬೆಳಿಗ್ಗೆ ಸುಮಾರು 6.15ಕ್ಕೆ ಈ ಘಟನೆ ನಡೆದಿದೆ. ನಾರಾಯಣ ರೆಡ್ಡಿ ಹತ್ಯೆ ತನಿಖೆ ಕೈಗೊಂಡಿರುವ ಪೋಲೀಸರು ಈ ಹತ್ಯೆ ಹಿಂದೆ ರಾಜಕೀಯದ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 ವೈಯಕ್ತಿಕ ದ್ವೇಷವೇ ಹತ್ಯೆಗೆ ಕಾರಣವೆನ್ನಲಾಗಿದ್ದು ಈ ಪ್ರದೇಶದ ಪ್ರಭಾವಿ ಮುಖಂಡರಾಗಿದ್ದ ನ್ರಾಯಣ ರೆಡ್ಡಿ ಗ್ರಾಮದ ಇನ್ನೊಂದು ಗುಂಪಿನ ಜನಗಳೊಡನೆ ವೈರತ್ವ ಹೊಂದಿದ್ದರು. ಅಲ್ಲದೆ ಆ ಗುಂಪಿನ ಮೇಲೆ ಹಿಂದೊಮ್ಮೆ ಹಲ್ಲೆ ನಡೆಸಿದ್ದರೆಂದು ಪ್ರಸಿದ್ದ ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ.
ಆದರೆ ನಾರಾಯಣ ರೆಡ್ಡಿ ಬೆಂಬಲಿಗರು ಇವರ ಸಾವಿನ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಘಟನೆ ಬಳಿಕ ನಾರಾಯಣ ರೆಡ್ಡಿ ಬೆಂಬಲಿಗರು ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಾರಣಂತಿಕವಾಗಿ ಹಲ್ಲೆ ನಡೆಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎ ಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ನಾರಾಯಣ ರೆಡ್ಡಿ ಹತ್ಯೆ ಕುರಿತಂತೆ ಪೋಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. ಬರುವ ಡಿಸೆಂಬರ್ 7ಕ್ಕೆ ತೆಲಂಗಾಣ ವಿಧಾನಸಭೆ ಚುನಾವಣೆ ಇದ್ದು ನಾರಾಯಣ ರೆಡ್ಡಿ ಸಾವು ಹಾಗ್ಯೂ ಕಾಮ್ಗ್ರೆಸ್ ಕಾರ್ಯಕರ್ತರ ಮೇಲಿನ ಹಲ್ಲೆ ಈ ಸುತ್ತಲ ಪ್ರದೇಶದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com