ವಿಚ್ಛೇದನ ವಿವಾದ: ಐಶ್ವರ್ಯ ರೈಗೆ ಅತ್ತೆ ಸಾಥ್, ಒಬ್ಬಂಟಿಯಾದ ತೇಜ್, ನಾನು ಮನೆಗೆ ಬರುವುದಿಲ್ಲವೆಂದ 'ಪ್ರತಾಪ'!

ಆರು ತಿಂಗಳ ಹಿಂದೆ ಅದ್ಧೂರಿಯಾಗಿ ವಿವಾಹವಾಗಿದ್ದ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಇದೀಗ ಪತ್ನಿ ಐಶ್ವರ್ಯಗೆ...
ಐಶ್ವರ್ಯ ರೈ-ತೇಜ್ ಪ್ರತಾಪ್ ಯಾದವ್-ನಿತೀಶ್ ಕುಮಾರ್
ಐಶ್ವರ್ಯ ರೈ-ತೇಜ್ ಪ್ರತಾಪ್ ಯಾದವ್-ನಿತೀಶ್ ಕುಮಾರ್
ಪಾಟ್ನಾ: ಆರು ತಿಂಗಳ ಹಿಂದೆ ಅದ್ಧೂರಿಯಾಗಿ ವಿವಾಹವಾಗಿದ್ದ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಇದೀಗ ಪತ್ನಿ ಐಶ್ವರ್ಯಗೆ ವಿಚ್ಛೇದನ ನೀಡುತ್ತಿದ್ದು ಇದಕ್ಕೆ ಕುಟುಂಬಸ್ಥರು ಸಮ್ಮತಿ ನೀಡುವವರೆಗೂ ಮನೆಗೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. 
ಶತಾಯ ಗತಾಯ ಪತ್ನಿಗೆ ವಿಚ್ಛೇದನ ಕೊಟ್ಟೆ ತೀರುತ್ತೀನಿ ಎಂದು ನಿರ್ಣಯ ಮಾಡಿರುವ ತೇಜ್ ಪ್ರತಾಪ್ ಸದ್ಯ ಮನೆಗೆ ಹೋಗದೆ ಧಾರ್ಮಿಕ ಕ್ಷೇತ್ರಗಳ ಭೇಟಿಯನ್ನು ಮುಂದುವರೆಸಿದ್ದಾರೆ. 
ತೇಜಸ್ವಿ ಯಾದವ್ ದೆಹಲಿಯಲ್ಲಿ ತನ್ನ ಸಹೋದರಿಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಪಾರ್ಟಿಗೆ ಆಹ್ವಾನಿಸಿದ್ದು ತಾವು ಹೋಗುವುದಿಲ್ಲ ಎಂದು ತೇಜ್ ಪ್ರತಾಪ್ ಹೇಳಿದ್ದಾರೆ. 
ತೇಜ್ ಪ್ರತಾಪ್ ನಿನ್ನೆಯಷ್ಟೇ ಬೋಧ್ ಗಯಾದ ಹೋಟೆಲ್ ವೊಂದರಿಂದ ಚೆಕ್ ಔಟ್ ಆಗಿದ್ದರು. ಇಂದು ಹರಿದ್ವಾರದಲ್ಲಿ ಪ್ರತ್ಯೇಕ್ಷವಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com