ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶಿವನ ಲಿಂಗನ ಬಳಿ ಇರುವ ಚೇಳು ಎಂಬ ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿಕೆ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಕೈಗೆತ್ತಿಕೊಂಡಿದೆ.
ಈ ಸಂಬಂಧ ದೆಹಲಿ ಬಿಜೆಪಿ ಮುಖಂಡ ರಾಜೀವ್ ಬಬ್ಬರ್ ದಾಖಲಿಸಿರುವ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ಎಸಿಎಂಎಂ ನ್ಯಾಯಾಧೀಶ ಸಮರ್ ವಿಶಾಲ್ , ಅರ್ಜಿದಾರರ ಹೇಳಿಕೆ ದಾಖಲಿಸಲು ಡಿಸೆಂಬರ್ 22ನ್ನು ನಿಗದಿಪಡಿಸಿದ್ದಾರೆ.
ಶಶಿ ತರೂರ್ ಹಿಂದೂ ದೇವರುಗಳನ್ನು ನಿಂದಿಸಿರುವುದು ಮಾತ್ರವಲ್ಲದೇ ಅಪಮಾನ ಕೂಡ ಮಾಡಿದ್ದಾರೆ .ತರೂರ್ ಹೇಳಿಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಜನರ ನಂಬಿಕೆಯನ್ನು ಘಾಸಿಗೊಳಿಸಿದೆ ಎಂದು ಎಂದು ದೆಹಲಿ ಬಿಜೆಪಿ ಉಪಾಧ್ಯಕ್ಷ ರಾಜ್ ಬಬ್ಬರ್ ದೂರಿನಲ್ಲಿ ಆರೋಪಿಸಿದ್ದರು.
Advertisement