ಸೆ.25, 2017 ದಿನಾಂಕದ ಪತ್ರದಲ್ಲಿ ಈ ರೀತಿ ಬರೆಯಲಾಗಿದೆ: "ದೇಶಾದ್ಯಂತ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡು ನಾವು ಪ್ರತಿಭಟನೆಗಳನ್ನು ತೀವ್ರಗೊಳಿಸಬೇಕು, ಸರ್ಕಾರಿ ಪಡೆಗಳು ಎಂದಿಗೂ ವಿದ್ಯಾರ್ಥಿಗಳೆಡೆಗೆ ಮೃದು ಧೋರಣೆ ಹೊಂದಿರುತ್ತವೆ, ಇದೇ ಮುಂದೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಸರ್ಕಾರವನ್ನು ಅನನುಕೂಲ ಪರಿಸ್ಥಿತಿ ಎದುರಿಸುವಂತೆ ಮಾಡುತ್ತದೆ. ಈ ರೀತಿ ಪ್ರತಿಭಟನೆಗಳನ್ನು ನಡೆಸುವುದಕ್ಕೆ ಸಹಕರಿಸಲು ಕಾಂಗ್ರೆಸ್ ನಾಯಕರು ಬಯಸುತ್ತಿದ್ದಾರೆ, ಅಷ್ಟೇ ಅಲ್ಲದೇ ನಮ್ಮ ಪ್ರತಿಭಟನೆಗಳಿಗೆ ಹಣದ ಸಹಾಯವನ್ನೂ ಮಾಡಲು ಒಪ್ಪಿಕೊಂಡಿದ್ದಾರೆ, ಈ ಕುರಿತು ನಮ್ಮ ಸ್ನೇಹಿತನನ್ನು ಸಂಪರ್ಕಿಸಬಹುದು (ಸಂಪರ್ಕಿಸಲು ಸೂಚಿಸಿದ ದೂರವಾಣಿ ಸಂಖ್ಯೆ ದಿಗ್ವಿಜಯ್ ಸಿಂಗ್ ಅವರದ್ದು ಎಂಬುದು ಚಾರ್ಜ್ ಶೀಟ್ ನಲ್ಲಿ ತಿಳಿದುಬಂದಿದೆ) ಎಂದು ಪತ್ರದಲ್ಲಿ ಬರೆಯಲಾಗಿದ್ದು ಪತ್ರವನ್ನು ಚಾರ್ಜ್ ಶೀಟ್ ನ ಭಾಗವನ್ನಾಗಿಸಲಾಗಿದೆ.