ಕನ್ನಯ್ಯ ಕುಮಾರ್, ಜಿಗ್ನೆಶ್ ಮೇವಾನಿ ಮೇಲೆ ಮಸಿ ಎರಚಿದ ವ್ಯಕ್ತಿ

ಗುಜರಾತ್ ಶಾಸಕ ಜಿಗ್ನೆಶ್ ಮೇವಾನಿ ಹಾಗೂ ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಕನ್ನಯ್ಯ ಕುಮಾರ್ ಮೇಲೆ...
ಜಿಗ್ನೆಶ್ ಮೇವಾನಿ
ಜಿಗ್ನೆಶ್ ಮೇವಾನಿ
ಗ್ವಾಲಿಯರ್: ಗುಜರಾತ್ ಶಾಸಕ ಜಿಗ್ನೆಶ್ ಮೇವಾನಿ ಹಾಗೂ ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಕನ್ನಯ್ಯ ಕುಮಾರ್ ಮೇಲೆ ಬಲ ಪಂಥೀಯ ಸಂಘಟನೆಯ ವ್ಯಕ್ತಿಯೊಬ್ಬ ಮಸಿ ಎರಚಿತ ಘಟನೆ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಗ್ನೆಶ್ ಮೇವಾನಿ ಮತ್ತು ಕನ್ನಯ್ಯ ಕುಮಾರ್ ಅವರು ಸಂವಿಧಾನ ಬಚಾವೋ ಆಂದೋಲನದ ಭಾಗವಾಗಿ ಇಂದು ವಾಣಿಜ್ಯ ಮಂಡಳಿ ಭವನದಲ್ಲಿ ಸೆಮಿನಾರ್ ಉದ್ದೇಶಿಸಿ ಮಾತನಾಡಲು ಆಗಮಿಸಿದ್ದರು.
ಹಿಂದು ಸೇನಾ ಸಂಘಟನೆಯ ಮುಕೇಶ್ ಪಾಲ್ ಎಂಬ ವ್ಯಕ್ತಿ ಈ ಇಬ್ಬರು ನಾಯಕರ ಮೇಲೆ ಮಸಿ ಎರಚಿದ್ದು, ಅದು ಅವರ ಶರ್ಟ್ ಮೇಲೆ ಬಿದ್ದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾದಿಕಾರಿ ಎಸ್ ಎಸ್ ಥೋಮರ್ ಅವರು ತಿಳಿಸಿದ್ದಾರೆ.
ಜಿಗ್ನೆಶ್ ಮೇವಾನಿ ಮತ್ತು ಕನ್ನಯ್ಯ ಕುಮಾರ್ ಅವರು ನಿಗದಿಯಂತೆ ಸೆಮಿನಾರ್ ಉದ್ದೇಶಿಸಿ ಮಾತನಾಡಿದ್ದು, ಅದನ್ನು ವಿಡಿಯೋ ಮಾಡಲಾಗಿದೆ ಎಂದು ಥೋಮರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com