ಭಾನುವಾರ ಸಂಜೆ ಯುವತಿ ಶೌಚಾಲಯಕ್ಕೆಂದು ತೆರಳಿದ್ದಾಗ ಆಕೆಯ ಸೋದರ ಸಂಬಂಧಿ ಅಲ್ಲಿಗೆ ಹಾಜರಾಗಿದ್ದಾನೆ. ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಕಡೆಗೆ ಆಕೆ ನಿರಾಕರಿಸುತ್ತಿದ್ದಂತೆ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್ ಸಿಂಗ್ ಹೇಳಿದರು.