ಚೆನ್ನೈನಲ್ಲಿನ ಅಮೆರಿಕನ್ ದೂತಾವಾಸ ಕಛೇರಿಗೆ ಅಂಡಮಾನ್ ನಲಿ ಪ್ರವಾಸಕ್ಕೆ ತೆರಳಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದರೂ ಅದನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಇನ್ನು ಉತ್ತರ ಸೆಂಟಿನೆಲ್ ದ್ವೀಪ ಸಮೂಹವು ಒಂದು ಸಂರಕ್ಷಿತ ಪ್ರದೇಶವಾಗಿದ್ದು ಪ್ರವಾಸಿಗರಿಗೆ ಮುಕ್ತವಾಗಿರುವುದಿಲ್ಲ ಎಂದು ಸಮಾಜಶಾಸ್ತ್ರ ವಿಜ್ಞಾನಿ ಮತ್ತು ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ ನ ಶಿವ ವಿಶ್ವನಾಥನ್ ಹೇಳಿದ್ದಾರೆ."ಬುಡಕಟ್ಟು ಸಮುದಾಯದ ಎಷ್ಟು ಜನ ಇಲ್ಲಿ ವಾಸವಿದ್ದಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ, ಆದರೆ ಅವರ ಸಂಖ್ಯೆ ಕ್ಷೀಣಿಸುತ್ತಿದೆ, ಸರ್ಕಾರ ಇತ್ತ ಗಮನ ನೀಡಬೇಕು" ಅವರು ವಿವರಿಸಿದ್ದಾರೆ.