ತಕ್ಷಣವೇ ವಿಧಾನಸಭೆ ವಿಸರ್ಜನೆಗೆ ಆದೇಶ ನೀಡಿರುವುದಕ್ಕೆ ಪ್ರಮುಖ ಕಾರಣಗಳನ್ನು ನೀಡಿರುವ ರಾಜ್ಯಪಾಲರು, ಪರಸ್ಪರ ವಿರುದ್ಧವಾಗಿರುವ ರಾಜಕೀಯ ಸಿದ್ಧಾಂತ ಹೊಂದಿರುವ ಪಕ್ಷಗಳು ಒಟ್ಟಿಗೆ ಸರ್ಕಾರ ರಚಿಸಿದಾಗ ಸ್ಥಿರ ಆಡಳಿತ ನೀಡುವುದಕ್ಕೆ ಸಾಧ್ಯತೆಗಳು ಕಡಿಮೆ ಇವೆ. ಅಷ್ಟೇ ಅಲ್ಲದೇ ಈ ಹಂತದಲ್ಲಿ ಕುದುರೆ ವ್ಯಾಪಾರವೂ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆ ವಿಸರ್ಜನೆಗೆ ಆದೇಶ ನೀಡಿರುವುದಾಗಿ ಹೇಳಿದ್ದಾರೆ.