ಇದೇ ವೇಳೆ ಜಮಾ ಮಸೀದಿ ಧ್ವಂಸ ಮಾಡಲು ಕರೆ ನೀಡಿರುವ ಸಂಸದ ಸಾಕ್ಷಿ ಮಹಾರಾಜ್, ಜಮಾ ಮಸೀದಿ ಇರುವ ಪ್ರದೇಶದಲ್ಲಿ ವಿಗ್ರಹಗಳಿವೆ, ಮಸೀದಿಯ ಮೆಟ್ಟಿಲುಗಳಿರುವ ಪ್ರದೇಶದ ಕೆಳಗೆ ವಿಗ್ರಹಗಳು ಪತ್ತೆಯಾಗದೇ ಇದ್ದಲ್ಲಿ ನನ್ನನ್ನು ಗಲ್ಲಿಗೇರಿಸಿ ಎಂದು ಸವಾಲು ಹಾಕಿದ್ದಾರೆ. ನಾನು ರಾಜಕೀಯಕ್ಕೆ ಬಂದ ನಂತರ ನನ್ನ ಮೊದಲ ಹೇಳಿಕೆ ಇದೇ ಆಗಿತ್ತು. ಈಗಲೂ ಈ ಹೇಳಿಕೆಗೆ ಬದ್ಧನಾಗಿದ್ದೇನೆ. ನಾನು ಮೊದಲು ರಾಜಕೀಯಕ್ಕೆ ಬಂದ ನಂತರದ ಹೇಳಿಕೆ ಮಥುರಾ, ಕಾಶಿ ಅಯೋಧ್ಯೆಯನ್ನು ಪಕ್ಕಕೆ ಇಡಿ ದೆಹಲಿಯಲ್ಲಿರುವ ಜಮಾ ಮಸೀದಿಯನ್ನು ಒಡೆಯಿರಿ ಅಲ್ಲಿನ ಸ್ಟೈರ್ ಕೇಸ್ ಕೆಳಗೆ ವಿಗ್ರಹಗಳು ಪತ್ತೆಯಾಗದೇ ಇದ್ದರೆ ನನ್ನನ್ನು ಗಲ್ಲಿಗೇರಿಸಿ ಎಂದು ಹೇಳಿದ್ದೆ. ಈಗಲೂ ಆ ಹೇಳಿಕೆಗೆ ನಾನು ಬದ್ಧ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.