ಜಮ್ಮು-ಕಾಶ್ಮೀರದ ರಾಜ್ಯಪಾಲರಿಗೆ ಎನ್ ಸಿ, ಪಿಡಿಪಿಯಿಂದ ಅಭಿನಂದನೆ!

ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ಏಕಾ ಏಕಿ ವಿಸರ್ಜನೆ ಮಾಡಿದ್ದಕ್ಕಾಗಿ ತೀವ್ರ ಟೀಕೆಗೊಳಗಾಗಿದ್ದ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲೀಕ್ ಅವರಿಗೆ ಪಿಡಿಪಿ, ಎನ್ ಸಿ ಪಕ್ಷಗಳೇ ಈಗ ಅಭಿನಂದನೆ ಸಲ್ಲಿಸಿವೆ.
ಜಮ್ಮು-ಕಾಶ್ಮೀರದ ರಾಜ್ಯಪಾಲರಿಗೆ ಎನ್ ಸಿ, ಪಿಡಿಪಿಯಿಂದ ಅಭಿನಂದನೆ!
ಜಮ್ಮು-ಕಾಶ್ಮೀರದ ರಾಜ್ಯಪಾಲರಿಗೆ ಎನ್ ಸಿ, ಪಿಡಿಪಿಯಿಂದ ಅಭಿನಂದನೆ!
ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ಏಕಾ ಏಕಿ ವಿಸರ್ಜನೆ ಮಾಡಿದ್ದಕ್ಕಾಗಿ ತೀವ್ರ ಟೀಕೆಗೊಳಗಾಗಿದ್ದ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲೀಕ್ ಅವರಿಗೆ ಪಿಡಿಪಿ, ಎನ್ ಸಿ ಪಕ್ಷಗಳೇ ಈಗ ಅಭಿನಂದನೆ ಸಲ್ಲಿಸಿವೆ. 
ಹೌದು, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದ ರಾಜ್ಯಪಾಲ ಸತ್ಯಪಾಲ್ ಮಲೀಕ್, ನಾನು ದೆಹಲಿಯತ್ತ ನೋಡಿದ್ದರೆ ಸಾಜದ್ ಲೋನ್ ಈ ವೇಳೆಗೆ ಸಿಎಂ ಆಗಿರುತ್ತಿದ್ದರು. ಆದರೆ ನಾನು ಹಾಗೆ ಮಾಡಲಿಲ್ಲ. ನಾನು ವಿಧಾನಸಭೆಯನ್ನು ವಿಸರ್ಜನೆ ಮಾಡುವ ನಿರ್ಧಾರ ತೆಗೆದುಕೊಂಡೆ ಎಂದು ಹೇಳಿದ ಬೆನ್ನಲ್ಲೇ ಪಿಡಿಪಿ, ಎನ್ ಸಿ ಪಕ್ಷಗಳ ನಾಯಕರು ರಾಜ್ಯಪಾಲರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 
ದೆಹಲಿಯತ್ತ ನೋಡದೇ ನಿರ್ಧಾರ ತೆಗೆದುಕೊಂಡ ರಾಜ್ಯಪಾಲರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ ಎಂದು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಹೇಳಿದ್ದರೆ, ದೆಹಲಿಯ ಆದೇಶಕ್ಕಾಗಿ ಎದುರು ನೋಡದೇ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರ ರಚನೆ ತಡೆಯುವುದಕ್ಕೆ, ಕುದುರೆ ವ್ಯಾಪಾರ ನಿಲ್ಲಿಸುವುದಕ್ಕೆ ಸಹಕರಿಸಿದ ರಾಜ್ಯಪಾಲರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com