ಹೌದು, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದ ರಾಜ್ಯಪಾಲ ಸತ್ಯಪಾಲ್ ಮಲೀಕ್, ನಾನು ದೆಹಲಿಯತ್ತ ನೋಡಿದ್ದರೆ ಸಾಜದ್ ಲೋನ್ ಈ ವೇಳೆಗೆ ಸಿಎಂ ಆಗಿರುತ್ತಿದ್ದರು. ಆದರೆ ನಾನು ಹಾಗೆ ಮಾಡಲಿಲ್ಲ. ನಾನು ವಿಧಾನಸಭೆಯನ್ನು ವಿಸರ್ಜನೆ ಮಾಡುವ ನಿರ್ಧಾರ ತೆಗೆದುಕೊಂಡೆ ಎಂದು ಹೇಳಿದ ಬೆನ್ನಲ್ಲೇ ಪಿಡಿಪಿ, ಎನ್ ಸಿ ಪಕ್ಷಗಳ ನಾಯಕರು ರಾಜ್ಯಪಾಲರಿಗೆ ಅಭಿನಂದನೆ ಸಲ್ಲಿಸಿದ್ದಾರೆ.