ನೋಟು ನಿಷೇಧ, ಎನ್ ಪಿಎ ಕುರಿತಂತೆ ವಿವರಣೆ ನೀಡಲು ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್, ಸಂಸತ್ ನ ಸಮಿತಿ ಎದುರು ನ.27 ರಂದು ಹಾಜರಾಗಿದ್ದಾರೆ.
ನ.12 ರಂದೇ ಉರ್ಜಿತ್ ಪಟೇಲ್ ಸಂಸತ್ ಸಮಿತಿ ಎದುರು ಹಾಜರಾಗಬೇಕಿತ್ತು. ಆದರೆ ಇಂದು ಸಮಿತಿಯ ಎದುರು ಹಾಜರಾಗಿರುವ ಉರ್ಜಿತ್ ಪಟೆಲ್, ಕೇಂದ್ರ ಸರ್ಕಾರ-ಆರ್ ಬಿಐ ನೊಂದಿಗಿನ ತಿಕ್ಕಾಟದ ನಂತರ ಸಂಸತ್ ಸಮಿತಿ ಎದುರು ಉರ್ಜಿತ್ ಪಟೇಲ್ ಹಾಜರಾಗಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಈ ಸಮಿತಿಯ ಸದಸ್ಯರಾಗಿದ್ದು, ಮಾಜಿ ಕೇಂದ್ರ ಸಚಿವ ವೀರಪ್ಪ ಮೋಯ್ಲಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.