ರಾಹುಲ್ ತಮ್ಮ ಗುರುತನ್ನು ಮರೆಸಿ ಸ್ವತಃ ಹಾಸ್ಯ ಮಾಡಿಕೊಳ್ಳುತ್ತಿದ್ದಾರೆ: ಗೋತ್ರ ಪ್ರವರ ಕುರಿತು ಬಿಜೆಪಿ ವ್ಯಂಗ್ಯ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಾನು "ಕಾಶ್ಮೀಇ ಬ್ರಾಹ್ಮಣ" ನನ್ನದು "ದತ್ತಾತ್ರೇಯ ಗೋತ್ರ": ಎಂದು ಹೇಳಿಕೊಂಡಿರುವುದು ಹಾಸ್ಯಾಸ್ಪದ. ರಾಹುಲ್ "ಗೋತ್ರ" ಹೇಳುವ ಮೂಲಕ ಅವರು....
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಾನು "ಕಾಶ್ಮೀಇ ಬ್ರಾಹ್ಮಣ" ನನ್ನದು "ದತ್ತಾತ್ರೇಯ ಗೋತ್ರ": ಎಂದು ಹೇಳಿಕೊಂಡಿರುವುದು ಹಾಸ್ಯಾಸ್ಪದ. ರಾಹುಲ್ "ಗೋತ್ರ" ಹೇಳುವ ಮೂಲಕ ಅವರು ತಮ್ಮ ಗುರುತನ್ನು ಮರೆ ಮಾಚುತ್ತಿದ್ದಾರೆ ಹಾಗೂ ಅವರು ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ದೂರಿದೆ.
ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ಮಾತನಾಡಿ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ವೇಳೆ ಕಾಂಗ್ರೆಸ್ ಜಾತಿ, ಸಾಮುದಾಯಿಕ ನಿರೂಪಣೆ ಮೂಲಕ ಜನರನ್ನು ಮೋಸಗೊಳಿಸಲು ಪ್ರಯತ್ನಿಸಿದೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ "ಗೋತ್ರ" ಹೇಳಿಕೊಳ್ಳುವ ಮೂಲಕ ತಮ್ಮ ನೈಜ ಗುರುತನ್ನು ಮರೆಸುತ್ತಿದ್ದಾರೆ, ತಮ್ಮನ್ನು ಸ್ವತ ಹಾಸ್ಯ ಮಾಡಿಕೊಳ್ಳುತ್ತಿದ್ದಾರೆ" ಎಂದರು.
"ಚುನಾವಣಾ ಋತುವಿನಲ್ಲಿ, ಅಂತಹ ಸಿನಿಕತನದ ಪ್ರಯತ್ನಗಳು ಕಾಂಗ್ರೆಸ್ ಪಕ್ಷದ ಬೌದ್ಧಿಕ ದಿವಾಳಿತನದ ಬಗ್ಗೆ ಮತ್ತು ಬಿಜೆಪಿಯ ಅಭಿವೃದ್ದಿ ಅಜೆಂಡಾದೊಡನೆ ತಮ್ಮ ಪಕ್ಷದ ಸರ್ಕಾರಗಳು ತೊಡಗಿಸಿಕೊಳ್ಳುವುದಕ್ಕೆ ವಿಫಲವಾಗಿರುವುದನ್ನು ತೋರಿಸುತ್ತದೆ"ರಾವ್ ಹೇಳಿದ್ದಾರೆ.
ರಾಜಸ್ಥಾನದ ರ್ಯಾಲಿಗಳಿಗೆ ತೆರಳುವ ಮುನ್ನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಜ್ಮೀರ್ ದರ್ಗಾ ಹಾಗೂ ಪುಇಷ್ಕರದ ಪ್ರಸಿದ್ದ ಬ್ರಹ್ಮ ದೇವಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ತಾನು ಕಾಶ್ಮೀರದ ಕೌಲ್ ಬ್ರಾಹ್ಮಣ, ದತ್ತಾತ್ರೇಯ ಗೋತ್ರಕ್ಕೆ ಸೇರಿದವರೆಂದು ಹೇಳಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com