ಕೋಮರಾಮ್ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿ ಮಾತನಾಡುತ್ತಿದ್ದ ಕೆಸಿಆರ್ ಅವರಿಗೆ ವ್ಯಕ್ತಿಯೊಬ್ಬರು ಮುಸ್ಲಿಮರಿಗೆ ಶೇ.12ರಷ್ಟು ಮೀಸಲಾತಿ ನೀಡುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕೆಸಿಆರ್ ಅವರು, ಏನು ಮಾತನಾಡುತ್ತಿದ್ದಿ? ಸುಮ್ನೆ ಕುತ್ಕೊ, ನಿಮ್ಮ ಅಪ್ಪನಿಗೆ ಹೇಳುತ್ತೇನೆ. ಏನು ತಮಾಷೆ ಮಾಡುತ್ತಿದ್ದೀಯಾ? ಎಂದು ಗದರಿದ್ದಾರೆ.