ಸಿಎಂ ಭೇಟಿ ಮಾಡಿದ ಆ್ಯಪಲ್​ ಕಂಪನಿ ಉದ್ಯೋಗಿ ವಿವೇಕ್ ಕುಟುಂಬ: ನೆರವಿನ ಭರವಸೆ ನೀಡಿದ ಯೋಗಿ

ಆ್ಯಪಲ್​ ಕಂಪನಿ ಉದ್ಯೋಗಿ ವಿಕಾಸ್​ ತಿವಾರಿ ಹತ್ಯೆ ಪ್ರಕರಣ ಅತ್ಯಂತ ದುಃಖಕರ ವಿಚಾರ. ಇಂತಹ ಗೂಂಡಾಗಿರಿ ಚುಟುವಟಿಕೆಗಳನ್ನು ಸರ್ಕಾರ ಎಂದಿಗೂ...
ವಿವೇಕ್  ತಿವಾರಿ ಕುಟುಂಬದಿಂದ ಸಿಎಂ ಯೋಗಿ ಆದಿತ್ಯ ನಾಥ್ ಭೇಟಿ
ವಿವೇಕ್ ತಿವಾರಿ ಕುಟುಂಬದಿಂದ ಸಿಎಂ ಯೋಗಿ ಆದಿತ್ಯ ನಾಥ್ ಭೇಟಿ
ಲಕ್ನೋ:  ಆ್ಯಪಲ್​ ಕಂಪನಿ ಉದ್ಯೋಗಿ ವಿವೇಕ್​ ತಿವಾರಿ ಹತ್ಯೆ ಪ್ರಕರಣ ಅತ್ಯಂತ ದುಃಖಕರ ವಿಚಾರ. ಇಂತಹ ಗೂಂಡಾಗಿರಿ ಚುಟುವಟಿಕೆಗಳನ್ನು ಸರ್ಕಾರ ಎಂದಿಗೂ ಸಹಿಸುವುದಿಲ್ಲ, ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಂಡಿದೆ ಎಂದು ಹೇಳಿರುವ ಅವರು ವಿಕಾಸ್ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಈಗಾಗಲೇ ಕೇಸು ದಾಖಲಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಮೃತನ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಭರಿಸಲಿದೆ ಎಂದು ಆದಿತ್ಯನಾಥ್​ ಭರವಸೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ವಿವೇಕ್ ಪತ್ನಿ ಕಲ್ಪನಾ , ಎಲ್ಲಾ ರೀತಿಯ ನೆರವು ನೀಡುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಭರವಸೆ ನೀಡಿರುವುದಾಗಿ ಹೇಳಿದ್ದಾರೆ.
ಕಳೆದ ಶುಕ್ರವಾರ ವಿವೇಕ್​ ತಿವಾರಿ ಮೇಲೆ ನಡೆದಿದ್ದ ಶೂಟ್​ಔಟ್​ ಪ್ರಕರಣ ದೇಶದಲ್ಲಿ ಸಂಚಲನವನ್ನುಂಟು ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com