ಸುಬ್ರಮಣಿಯನ್ ಸ್ವಾಮಿ
ದೇಶ
ಇಮ್ರಾನ್ ಖಾನ್ ಚಪರಾಸಿ, ಪಾಕಿಸ್ತಾನವನ್ನು 4 ಭಾಗ ಮಾಡಿದರೆ ಸಮಸ್ಯೆ ಪರಿಹಾರ: ಸುಬ್ರಮಣಿಯನ್ ಸ್ವಾಮಿ
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒಬ್ಬ ಜವಾನ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಲೇವಡಿ ಮಾಡಿದ್ದಾರೆ, ಇಸ್ಲಮಾಬಾದ್ ಅನ್ನು ...
ಅಗರ್ತಲಾ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒಬ್ಬ ಜವಾನ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಲೇವಡಿ ಮಾಡಿದ್ದಾರೆ, ಇಸ್ಲಮಾಬಾದ್ ಅನ್ನು ಮಿಲಿಟರಿ ಮತ್ತು ಐಎಸ್ ಐ ಹಾಗೂ ಭಯೋತ್ಪಾದಕರು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪಾಕಿಸ್ತಾನವನ್ನು ಐಎಸ್ಐ ಮತ್ತು ಭಯೋತ್ಪಾದಕರು ನಡೆಸುತ್ತಿದ್ದಾರೆ, ಇಮ್ರಾನ್ ಖಾನ್ ಜವಾನನಿಗಿಂತ ಭಿನ್ನವಲ್ಲ, ಅವರದ್ದು ಕೇವಲ ಜವಾನನ ಕೆಲಸ ಎಂದು ಸುದ್ದಿಗೋಷ್ಟಿಯಲ್ಲಿ ಸ್ವಾಮಿ ಆರೋಪಿಸಿದ್ದಾರೆ.
ಪಾಕಿಸ್ತಾನಕ್ಕ ಒಂದೇ ಒಂದು ಪರಿಹಾರವಿದೆ. ಬಲೋಚಿಗಳು ಪಾಕಿಸ್ತಾನದ ಭಾಗವಾಗಿರಲು ಇಷ್ಟವಿಲ್ಲ, ಸಿಂಧಿಗಳಿಗೂ ಪಾಕಿಸ್ತಾನದ ಜೊತೆ ಇರಲು ಇಷ್ಟವಿಲ್ಲ, ಹೀಗಾಗಿ ಪಾಕಿಸ್ತಾನವನ್ನು ನಾಲ್ಕು ಭಾಗ ಮಾಡುವುದು ಸಮಸ್ಯೆಗೆ ಪರಿಹರವಾಗಿದೆ.
ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದ ಬಗ್ಗೆ ಮಾತನಾಡಿ ತಮ್ಮ ಉಸಿರನ್ನು ವ್ಯರ್ಥ ಮಾಡುವ ಅವಶ್ಯಕತೆ ಇರುವುದಿಲ್ಲ, ಪಾಕಿಸ್ತಾನವನ್ನು ನಿರ್ಲಕ್ಷ್ಯ ಮಾಡಬೇಕು, ನಿಮ್ಮ ಪಾಕಿಸ್ತಾನವನ್ನು ಮಿಲಿಟರಿ ನಾಲ್ಕು ಭಾಗ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಗಡಿಯಲ್ಲಿ ಭಯೋತ್ಪದಕತೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಶನಿವಾರ ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆಯಲ್ಲಿ ಆರೋಪಿಸಿದ ನಂತರ ಸ್ವಾಮಿ ಈ ರೀತಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ