ಕಂಟೋನ್ಮೆಂಟ್ ಹೌಸ್ ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಪತ್ರಿಕಾಗೋಷ್ಥಿಯನ್ನುದ್ದೇಶಿಸಿ ಮಾತನಾಡಿದ ರಮೇಶ್ ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಕಾಯ್ದೆಗಳ ದುರುಪಯೋಗ ಹಾಗೂ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಿದ್ದಾರೆ.ಅಬಕಾರಿ ನೀತಿ ನಿಯಮಗಳ ವಿರುದ್ಧ ಖಾಸಗಿ ವ್ಯಕ್ತಿಗಳಿಗೆ ಮೂರು ಬ್ರೇವರಿ ಲೈಸೆನ್ಸ್ ಹಂಚಿಕೆ ಮಾಡಿದ್ದಾರೆ.ಈ ಮೂಲಕ ಅವರು ಕಾನೂನು ಬಾಹಿರ ಕ್ರಿಮಿನಲ್ ಪಿತೂರಿ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎಂದರು.