ಇದಕ್ಕೂ ಮುನ್ನ ಈ ವರ್ಷ ಜುಲೈ ನಲ್ಲಿ ಅಣ್ಣಾ ಹಜಾರೆ ತಾವು ಅಕ್ಟೋಬರ್ 2ರಿಂದ ಉಪವಾಸ ಸ್ತ್ಯಾಗ್ರಹ ಹೂಡುವುದಾಗಿ ಘೋಷಿಸಿದ್ದರು. ಕೇಂದ್ರ ಸರ್ಕಾರ ಲೋಕಪಾಲ್ ನೇಮಕ ವಿಳಂಬ ಮಾಡುತ್ತಿದೆ, ಲೋಕಪಾಲ್ ಕಾಯ್ದೆ ಜಾರಿಗೆ ಸಮ್ಮತಿಸುತ್ತಿಲ್ಲ ಹೀಗಾಗಿ ಇದನ್ನು ಖಂಡಿಸಿ ತಾನು ಮಹಾರಾಷ್ಟ್ರದ ರಾಲೆಗಣ್ ಸಿದ್ದಿಯಲ್ಲಿ ಉಪವಾಸ ಸತ್ಯಾಗ್ರಹ ಕುಳಿತು ಹೋರಾಟ ಪ್ರಾರಂಭಿಸುತ್ತೇನೆ ಎಂದು ಘೋಷಿಸಿದ್ದರು.