ಆದರೆ ಆಯೋಗ ಹೇಳುವಂತೆ 1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 151ಎ ನಿಯಮದ ಅನುಸಾರ ದೇಶದ ಯಾವುದೇ ಭಾಗದಲ್ಲಿ ಸಂಸತ್ತು ಅಥವಾ ವಿಧಾನಸಭೆ ಅಭ್ಯರ್ಥಿ ಮೃತನಾದರೆ ಅಥವಾ ರಾಜೀನಾಮೆ ಸಲ್ಲಿಸಿದ್ದರೆ ಅದರಿಂದಾಗಿ ತೆರವಾದ ಸ್ಥಾನವನ್ನು ಆರು ತಿಂಗಳಿನಲಿ ಚುನಾವಣೆ ಮೂಲಕ ಭರ್ತಿಗೊಳಿಸುವುದು ಆಯೋಗದ ಜವಾಬ್ದಾರಿಯಾಗಿದೆ.ಹೀಗಾಗಿ ಕರ್ನಾಟಕದ ಮೂರು ಲೋಕಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವುದು ಅನಿವಾರ್ಯವಾಗಲಿದೆ.