ನವೀನ್ ಹತ್ಯೆಗಾಗಿ ತನ್ನ ಸಹೋದರ ತಲೀಬ್ ಹಾಗೂ ಸಮರ್ ಖಾನ್ ಎಂಬ ವ್ಯಕ್ತಿಗಳ ಸಹಾಯ ಪಡೆದುಕೊಂಡ ತಯ್ಯಾಬ್ ಅ.05 ರಂದು ನವೀನ್ ಗೆ ಕರೆ ಮಾಡಿ ಯಾವುದೋ ಕೆಲಸಕ್ಕೆ 5 ಲಕ್ಷ ರೂಪಾಯಿಗಳನ್ನು ತನ್ನ ಖಾತೆಗೆ ವರ್ಗಾವಣೆ ಮಾಡುವುದಕ್ಕಾಗಿ ಹೇಳಿದ್ದಾನೆ, ಆದರೆ ಸ್ವಲ್ಪವೂ ಯೋಚನೆ ಮಾಡದ ನವೀನ್ 2 ಲಕ್ಷ ರೂಪಯಿಗಳನ್ನು ನೀಡಿದ್ದ ಈ ಬಳಿಕ ಭೋವಪುರ್ ಏರಿಯಾಗೆ ಬರುವಂತೆ ನವೀನ್ ಗೆ ತಯ್ಯಾಬ್ ಸೂಚಿಸಿದ್ದಾನೆ, ನವೀನ್ ಅಲ್ಲಿಗೆ ಬರುತ್ತಿದ್ದಂತೆಯೇ ಆತನಿಗೆ ಮದ್ಯವನ್ನು ಕುಡಿಸಿ ಕಾರಿನಲ್ಲಿ ಕೂರಿಸಿದ್ದಾರೆ. ನಂತರ ಕಾರ್ ನ್ನು ಲಾಕ್ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ.