ಸ್ಫೋಟಗೊಂಡ ಸ್ಥಳ
ದೇಶ
ಗುವಾಹಟಿಯಲ್ಲಿ ಲಘು ಸ್ಪೋಟ: ನಾಲ್ವರಿಗೆ ಗಾಯ
ಮಧ್ಯಾಹ್ನ ಸಂಭವಿಸಿದ ಲಘು ಸ್ಪೋಟದಲ್ಲಿ ಮಹಿಳೆ ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ...
ಗುವಾಹಟಿ: ಮಧ್ಯಾಹ್ನ ಸಂಭವಿಸಿದ ಲಘು ಸ್ಪೋಟದಲ್ಲಿ ಮಹಿಳೆ ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ.
ಬ್ರಹ್ಮಪುತ್ರ ನದಿ ದಂಡೆಯ ಪಾನ್ ಬಜಾರ್ ಪ್ರದೇಶದ ಬಳಿಯಿರುವ ಸುರ್ಕೇಶ್ವರ ದೇವಾಲಯ ಬಳಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. 4 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಮಹೇಂದ್ರ ಮೋಹನ್ ಚೌಧರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಂತದಲ್ಲಿ ನಾವು ಏನು ಹೇಳಲಾಗದು, ಬಾಂಬ್ ಸ್ಪೋಟಿಸಿದೆಯೇ ಅಥವಾ ಬೇರೆ ಯಾವುದೇ ವಿಧ್ವಂಸಕ ಕೃತ್ಯವೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು, ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಆಗಮಿಸಿದ್ದು, ಪರಿಶಲಿಸುತ್ತಿದೆ. ಸ್ಪೋಟದ ತೀವ್ರತೆಗೆ ಕಾಂಕ್ರೀಟ್ ಗೋಟೆ ಹಾನಿಗೊಳಗಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ