ಗುವಾಹಟಿ: ಮಧ್ಯಾಹ್ನ ಸಂಭವಿಸಿದ ಲಘು ಸ್ಪೋಟದಲ್ಲಿ ಮಹಿಳೆ ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ.
ಬ್ರಹ್ಮಪುತ್ರ ನದಿ ದಂಡೆಯ ಪಾನ್ ಬಜಾರ್ ಪ್ರದೇಶದ ಬಳಿಯಿರುವ ಸುರ್ಕೇಶ್ವರ ದೇವಾಲಯ ಬಳಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. 4 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಮಹೇಂದ್ರ ಮೋಹನ್ ಚೌಧರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಂತದಲ್ಲಿ ನಾವು ಏನು ಹೇಳಲಾಗದು, ಬಾಂಬ್ ಸ್ಪೋಟಿಸಿದೆಯೇ ಅಥವಾ ಬೇರೆ ಯಾವುದೇ ವಿಧ್ವಂಸಕ ಕೃತ್ಯವೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು, ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಆಗಮಿಸಿದ್ದು, ಪರಿಶಲಿಸುತ್ತಿದೆ. ಸ್ಪೋಟದ ತೀವ್ರತೆಗೆ ಕಾಂಕ್ರೀಟ್ ಗೋಟೆ ಹಾನಿಗೊಳಗಾಗಿದೆ.