ಶಬರಿಮಲೆ 'ಸೆಕ್ಸ್ ಟೂರಿಸಂ' ಮಾಡುವ ಜಾಗವಲ್ಲ: ಟಿಡಿಬಿ ಮಾಜಿ ಅಧ್ಯಕ್ಷ

ಶಬರಿಮಲೆ ಸೆಕ್ಸ್ ಟೂರಿಸಂ ಮಾಡುವ ಜಾಗವಲ್ಲ ಎಂದು ತಿರುವಾಂಕೂರು ದೇವಸೋಂ ಮಂಡಳಿ ಮಾಜಿ ಅಧ್ಯಕ್ಷ ಪ್ರಯಾರ್ ಗೋಪಾಲಕೃಷ್ಣನ್ ಹೇಳಿದ್ದಾರೆ...
ಅಯ್ಯಪ್ಪ ಸ್ವಾಮಿ ದೇವಸ್ಥಾನ
ಅಯ್ಯಪ್ಪ ಸ್ವಾಮಿ ದೇವಸ್ಥಾನ
ತಿರುವನಂತಪುರ: ಶಬರಿಮಲೆ ಸೆಕ್ಸ್ ಟೂರಿಸಂ ಮಾಡುವ ಜಾಗವಲ್ಲ ಎಂದು ತಿರುವಾಂಕೂರು ದೇವಸೋಂ ಮಂಡಳಿ ಮಾಜಿ ಅಧ್ಯಕ್ಷ ಪ್ರಯಾರ್ ಗೋಪಾಲಕೃಷ್ಣನ್ ಹೇಳಿದ್ದಾರೆ. 
ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪ್ರಯಾರ್ ಗೋಪಾಲಕೃಷ್ಣನ್ ಅವರು, ಯಾವುದೋ ಕೆಟ್ಟ ಉದ್ದೇಶ ಇಟ್ಟುಕೊಂಡು ಇಡೀ ಸನ್ನಿವೇಶವನ್ನು ಸೃಷ್ಟಿಸಲಾಗುತ್ತಿದೆ ಎಂದಿದ್ದಾರೆ. 
ಗಲಭೆಯಲ್ಲಿ ಪೊಲೀಸರು ಪಾಲುದಾರರಾಗಿದ್ದಾರೆ ಎಂದಿರುವ ಗೋಪಾಲಕೃಷ್ಣನ್ ಶಬರಿಮಲೆ ಸೆಕ್ಸ್ ಟೂರಿಸಂ ಮಾಡುವ ಜಾಗವಲ್ಲ ಎಂದು ಹೇಳಿದ್ದಾರೆ.  
ಇದೇ ವೇಳೆ ದೇವಸ್ಥಾನದೊಳಗೆ ಮಹಿಳೆಯರಿಗೆ ಪ್ರವೇಶ ನೀಡುವ ವಿಚಾರವಾಗಿ ಅನಿರೀಕ್ಷಿತ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮಂಡಳಿ ಅಧ್ಯಕ್ಷ ಎ ಪದ್ಮಕುಮಾರ್ ವಿಚಾರದ ಕುರಿತಂತೆ ರಾಜಕೀಯ ಮಾಡಲು ನಾವು ನಿಂತಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com