ಸೋನಿಯಾ ಗಾಂಧಿ ಅಳಿಯ ವಾದ್ರಾಗೆ ಸಂಕಷ್ಟ, ಹರಿಯಾಣ ಮಾಜಿ ಸಿಎಂ ಹೂಡಾ, ವಾದ್ರಾ ವಿರುದ್ಧ ಎಫ್ಐಆರ್

ಗುರ್ಗಾಂವ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹಾಗೂ ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪೀಂದರ್ ಸಿಂಗ್...
ರಾಬರ್ಟ್ ವಾದ್ರಾ-ಭೂಪೀಂದರ್ ಸಿಂಗ್ ಹೂಡಾ
ರಾಬರ್ಟ್ ವಾದ್ರಾ-ಭೂಪೀಂದರ್ ಸಿಂಗ್ ಹೂಡಾ
ಚಂಢಿಗಢ: ಗುರ್ಗಾಂವ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹಾಗೂ ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪೀಂದರ್ ಸಿಂಗ್ ಹೂಡಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 
ರಾಬರ್ಟ್ ವಾದ್ರಾ, ಭೂಪೀಂದರ್ ಸಿಂಗ್ ಹೂಡಾ, ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈ. ಲೀ ಮತ್ತು ಡಿಎಲ್ಎಫ್ ಸೇರಿ ಹಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮನೆಸಾರ್ ಉಪ ಪೊಲೀಸ್ ಆಯುಕ್ತ ರಾಜೇಶ್ ಕುಮಾರ್ ತಿಳಿಸಿದ್ದಾರೆ. 
ನಹು ಮೂಲದ ಸುರೀಂದರ್ ಶರ್ಮಾ ಎಂಬುವರು ಭೂ ಹಗರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದು ಈ ಹಿನ್ನಲೆಯಲ್ಲಿ ಹರಿಯಾಣ ಪೊಲೀಸರು ಹೂಡಾ, ವಾದ್ರಾ ಸೇರಿದಂತೆ ಹಲವ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. 
ಗುರ್ಗಾಂವ್ ನ ನಾಲ್ಕು ಗ್ರಾಮಗಳಲ್ಲಿ ವಸತಿ ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣಗಳ ಅಭಿವೃದ್ಧಿಗಾಗಿ ಹಿಂದಿನ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದ್ದ ಪರವಾನಗಿಗಳನ್ನು ತನಿಖೆ ಮಾಡಲು 2015ರಲ್ಲಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಆಯೋಗವನ್ನು ರಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com