ಲಾಲೂ ಪ್ರಸಾದ್ ಯಾದವ್
ಲಾಲೂ ಪ್ರಸಾದ್ ಯಾದವ್

ಜೈಲಿನಲ್ಲಿರುವ ಲಾಲೂ ಗೆ ಖಿನ್ನತೆ: ಮನೋ ವೈದ್ಯರ ಸಹಾಯ ಕೋರಲಿರುವ ರಿಮ್ಸ್ ಡಾಕ್ಟರ್

ಬಹುಕೋಟಿ ಮೇವು ಹಗರಣದ ಪ್ರಮುಖ ಅಪರಾಧಿ ಮಾಜಿ ಸಿಎಂ ಹಾಗೂ ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಖಿನ್ನತೆಯಿಂದು ಬಳಲುತ್ತಿದ್ದು ಅವರಿಗೆ .,..
ರಾಂಚಿ: ಬಹುಕೋಟಿ ಮೇವು ಹಗರಣದ ಪ್ರಮುಖ ಅಪರಾಧಿ ಮಾಜಿ ಸಿಎಂ ಹಾಗೂ ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಖಿನ್ನತೆಯಿಂದು ಬಳಲುತ್ತಿದ್ದು ಅವರಿಗೆ ಮನೋವೈದ್ಯರ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ಲಾಲೂ ಪ್ರಸಾದ್ ಅವರ ಮಧುಮೇಹ ಪ್ರಮಾಣ ಹಾಗೂ  ರಕ್ತದೊತ್ತಡದ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ರಿಮ್ಸ್ ಮುಖ್ಯಸ್ಥ ಆರ್ ಕೆ ಶ್ರೀವತ್ಸ ಹೇಳಿದ್ದಾರೆ, ಕಳೆದ ಶನಿವಾರದಿಂದ ಲಾಲೂ ಪ್ರಸಾಧ್ ಅಸಹಜವಾಗಿ ವರ್ತಿಸತ್ತಿದ್ದಾರೆ, ಅವರನ್ನು ಪರಿಶೀಲಿಸಿದಾಗ ಅವರು ಸಣ್ಣ ಪ್ರಮಾಣದ ಖಿನ್ನತೆಗೊಳಗಾಗಿರುವುದು ತಿಳಿದು ಬಂದಿದೆ ಎಂದು ವೈದ್ರು ತಿಳಿಸಿದ್ದಾರೆ,
ಅವರಿಗೆ ಕಾಲು ಊದಿಕೊಂಡಿದ್ದು, ಸರಿಯಾಗಿ ನಡೆಯಲು ಆಗುತ್ತಿಲ್ಲ, ಸದ್ಯ ಅವರನ್ನು ನೀಗದಲ್ಲಿರಿಸಲಾಗಿದ್ದು, ಮನೋವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುವುದು ಎಂದು ಹೇಳಿದ್ದಾರೆ,
ಲಾಲೂ ಪ್ರಸಾದ್ ಅವರ ಅನಾರೋಗ್ಯ ಸಂಬಂಧ ಎಲ್ಲಾ ವರದಿಗಳನ್ನು ಬಿಸ್ರಾ-ಮುಂಡಾ ಜೈಲಿನ ಮುಖ್ಯಸ್ಥರಿಗೆ ಕಳುಹಿಸಲಾಗಿದೆ. ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com