ಕಾರ್ತಿ ಚಿದಂಬರಂ ಮಧ್ಯಂತರ ಜಾಮೀನು ರದ್ದುಗೊಳಿಸುವಂತೆ ಕೋರ್ಟ್ ಗೆ ಇಡಿ ಮನವಿ

ರ್ಸೆಲ್- ಮ್ಯಾಕ್ಸಿಕ್ ಹಗರಣದಲ್ಲಿ ಮಾಜಿ ಹಣಕಾಸು ಸಚಿವ ಪಿ, ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ನೀಡಿರುವ ಮಧ್ಯಂತರ ಜಾಮೀನು ರದ್ಧುಗೊಳಿಸುವಂತೆ ...
ಕಾರ್ತಿ ಚಿದಂಬರಂ
ಕಾರ್ತಿ ಚಿದಂಬರಂ
ನವದೆಹಲಿ: ಏರ್ಸೆಲ್- ಮ್ಯಾಕ್ಸಿಕ್ ಹಗರಣದಲ್ಲಿ  ಮಾಜಿ ಹಣಕಾಸು ಸಚಿವ ಪಿ, ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ನೀಡಿರುವ ಮಧ್ಯಂತರ ಜಾಮೀನು ರದ್ಧುಗೊಳಿಸುವಂತೆ ಪಾಟಿಯಾಲಾ ಹೌಸ್ ಕೋರ್ಟ್ ಗೆ ಜಾರಿ ನಿರ್ದೇಶನಲಾಯ ಮನವಿ ಮಾಡಿದೆ. 
ತನಿಖೆಯ ದಿಪ್ಪು ತಪ್ಪಿಸುತ್ತಿರುವ ಕಾರ್ತಿ ಚಿದಂಬರಂ ತನಿಖೆಗೆ ಸಹಕರಿಸುವಂತೆ ಸೂಚಿಸಲು ಹೇಳಿದೆ,  ತನಿಖೆ ವೇಳೆ ಅಸಹಕಾರ ತೋರುತ್ತಿರುವ ಕಾರ್ತಿ ಕೆಲವೊಮ್ಮೆ ಸಿಟ್ಟಾಗುತ್ತಾರೆ, ಹಾಗಾಗಿ ಅವರ ಮಧ್ಯಂತರ ಜಾಮೀನನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಲಾಗಿದೆ.
ವಿಚಾರಣೆ ವೇಳೆ ಕೇಳುವ ಪ್ರಶ್ನೆಗಳಿಗೆ ಅಸಂಬದ್ದವಾಗಿ ಉತ್ತರ ನೀಡುತ್ತಾರೆ, ಹೀಗಾಗಿ ಅವರನ್ನು ಕಸ್ಟಡಿಯೋಲ್ ವಿಚಾರಣೆಗೆ ಅನುಮುತಿ ನೀಡಬೇಕು ಎಂದು ಕೇಳಲಾಗಿದೆ, ಮಧ್ಯಾಹ್ನ 2 ಗಂಟೆ ದೆಹಲಿಯ ಪಾಟಿಯಾಲಾ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com