"1994 ರ ಇಸ್ರೋ ಬೇಹುಗಾರಿಕೆ ಪ್ರಕರಣದ ನಂತರದ ದಿನಗಳಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಿವಿ ನರಸಿಂಹ ರಾವ್ ಅವರು ನನ್ನ ತಂದೆ ಕರುಣಾಕರನ್ ಗೆ ಮೋಸ ಮಾಡಿದ್ದರು. ನನ್ನ ತಂದೆ ಹೇಳಿರುವ ಪ್ರಕಾರ, ಪಿವಿ ನರಸಿಂಹ ರಾವ್ ಅವರ ಅಂದಿನ ನಡೆಯ ಬಗ್ಗೆ ಅವರಿಗೆ ಬೇಸರವಿತ್ತು. 1995 ರ ಮಾ.15 ರಂದು ನನ್ನ ತಂದೆಗೆ ಕರೆ ಮಾಡಿದ್ದ ಕಾಂಗ್ರೆಸ್ ನಾಯಕ ಜಿ.ಕೆ ಮೂಪನಾರ್ ಅವರು ನರಸಿಂಹ ರಾವ್ ಅವರ ಸೂಚನೆಯಂತೆ ರಾಜೀನಾಮೆ ನೀಡುವಂತೆ ಸಲಹೆ ನೀಡಿದ್ದರು. ಅದರಂತೆಯೇ ನನ್ನ ತಂದೆ ಕರುಣಾಕರನ್ ರಾಜೀನಾಮೆಯನ್ನೂ ನೀಡಿದ್ದರು.