ಅತ್ಯಾಚಾರ ಆರೋಪಿಗಳ ಪರ ಯಾವುದೇ ವಕೀಲರು ನಿಲ್ಲಬಾರದು: ರೆವಾರಿ ಮಹಾಪಂಚಾಯತ್ ಆದೇಶ

ಅತ್ಯಾಚಾರ ಆರೋಪಿಗಳ ಪರ ಯಾವುದೇ ವಕೀಲರು ನಿಲ್ಲಬಾರದು: ರೆವಾರಿ ಮಹಾಪಂಚಾಯತ್ ಆದೇಶ

ಹರ್ಯಾಣದ ರೆವಾರಿ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮಹಾಪಂಚಾಯತ್ ಸಹ ಅತ್ಯಾಚಾರ ಆರೋಪಿಗಳ ವಿರುದ್ಧ ಕಠಿಣ ನಿಲುವು ತಳೆದಿದೆ.
ಹರ್ಯಾಣ: ಹರ್ಯಾಣದ ರೆವಾರಿ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮಹಾಪಂಚಾಯತ್ ಸಹ ಅತ್ಯಾಚಾರ ಆರೋಪಿಗಳ ವಿರುದ್ಧ ಕಠಿಣ ನಿಲುವು ತಳೆದಿದೆ. 
ಅತ್ತ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರೆ, ಇತ್ತ ರೆವಾರಿ ಮಹಾಪಂಚಾಯತ್ ಅತ್ಯಾಚಾರ ಆರೋಪಿಗಳ ಪರ ಯಾವುದೇ ವಕೀಲರೂ ವಕಾಲತ್ತು ವಹಿಸಬಾರದು ಎಂದು ಆದೇಶ ಹೊರಡಿಸಿದೆ.  25 ಗ್ರಾಮಗಳನ್ನು ಹೊಂದಿರುವ ಮಹಾಪಂಚಾಯತ್ ಈ ಆದೇಶ ಹೊರಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಪತ್ರವನ್ನೂ ಬರೆಯಲಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com