"ಅಣ್ಣಾ ಸ್ಮಾರಕದಲ್ಲಿ ಭೂಮಿಯನ್ನು ನೀಡಲು ಹೈಕೋರ್ಟ್ ನಿರ್ದೇಶಿಸಿದರೂ, ನಮ್ಮ ಔದಾರ್ಯದಿಂದಾಗಿ ಇದು ಸಾಧ್ಯವಾಗಿದೆ. ಅಣ್ಣಾ ಸ್ಮಾರಕದ ಪಕ್ಕ ಕರುಣಾನಿಧಿಯವರನ್ನು ಸಮಾಧಿ ಮಾಡಲು ಅವರು ಯಾವ ಅರ್ಹತೆ ಹೊಂದಿರಲಿಲ್ಲ. ಒಂದೊಮ್ಮೆ ಮುಖ್ಯಮಂತ್ರಿಯಾಗಿಯೇ ಕರುಣಾನಿಧಿ ಅಸುನೀಗಿದ್ದರೆ ಆಗ ಅವರಿಗೆ ಮರೀನಾ ಬೀಚ್ ನಲ್ಲೇ ಸಮಾಧಿ ಹೊಂದಲು ಸಹಜವಾದ ಅವಕಾಶವಿತ್ತು. ಆದರೂ ನಾವು ದೊಡ್ಡ ಮನಸ್ಸು ಂಆಡಿ ಅವರ ಮೃತದೇಹದ ಸಾರ್ವಜನಿಕ ವೀಕ್ಷಣೆಗೆ ರಾಜಾಜಿ ಹಾಲ್ ನಲ್ಲಿ ಅವಕಾಶ ನೀಡಿದ್ದೆವು" ಸಚಿವರು ಹೇಳಿದ್ದಾರೆ.