ಆಶಾ ಕಾರ್ಯಕರ್ತೆಯರಿಗೆ ನೆರವಿನ ಪ್ಯಾಕೇಜ್ :ಕೇಂದ್ರ ಸಂಪುಟ ಅನುಮೋದನೆ !

ಇದೇ ವರ್ಷದ ಅಕ್ಟೋಬರ್ ತಿಂಗಳಿನಿಂದ ಜಾರಿಗೆ ಬರುವಂತೆ ಆಶಾ ಕಾರ್ಯಕರ್ತೆಯರ ನೆರವಿನ ಪ್ಯಾಕೇಜ್ ಒದಗಿಸುವುದಕ್ಕೆ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಪ್ರಧಾನಿ ನರೇಂದ್ರಮೋದಿ
ಪ್ರಧಾನಿ ನರೇಂದ್ರಮೋದಿ
Updated on

ನವದೆಹಲಿ: ಇದೇ ವರ್ಷದ  ಅಕ್ಟೋಬರ್ ತಿಂಗಳಿನಿಂದ ಜಾರಿಗೆ ಬರುವಂತೆ ಆಶಾ ಕಾರ್ಯಕರ್ತೆಯರ  ನೆರವಿನ  ಪ್ಯಾಕೇಜ್ ಒದಗಿಸುವುದಕ್ಕೆ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಮೇಲಿನ  ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ  ಅನುಮೋದನೆ ನೀಡಲಾಗಿದೆ.

2018-2020 ರ ಅವಧಿಗಾಗಿ  1224.97 ಕೋಟಿ ರೂ ವೆಚ್ಚದಲ್ಲಿ ನೆರವಿನ ಪ್ಯಾಕೇಜ್  ಒದಗಿಸುತ್ತಿದ್ದು, ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಇದನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ  ಆಶಾ ಕಾರ್ಯಕರ್ತೆಯರಿಗೆ  ತಿಂಗಳಿಗೆ ದೊರೆಯುತ್ತಿದ್ದ 1 ಸಾವಿರ ರೂ ಗೌರವಧನವನ್ನು  2 ಸಾವಿರ ರೂ. ಗೆ ಏರಿಕೆ ಮಾಡಲಾಗಿದೆ.  ಆಶಾ ಕಾರ್ಯಕರ್ತೆಯರಿಗೆ  ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷ ಭೀಮಾ ಯೋಜನೆಯಲ್ಲಿ ಸೇರ್ಪಡಿಸುವ ಹಾಗೂ ಹೆಚ್ಚಿನ ಸಂಖ್ಯೆಯ ಆಶಾ ಕಾರ್ಯಕರ್ತೆಯರ ನೋಂದಣಿಯ ಗುರಿ ಉದ್ದೇಶದೊಂದಿಗೆ ಪ್ಯಾಕೇಜ್ ನೀಡಲಾಗುತ್ತಿದೆ.

ಸಾಮಾಜಿಕ ಯೋಜನೆಗಳಿಗೆ ವಾರ್ಷಿಕ ಪ್ರೀಮಿಯಂಗಳು ಕೇಂದ್ರ ಸರ್ಕಾರದಿಂದ ಪಾವತಿಸಲ್ಪಡುತ್ತವೆ, ಆದರೆ ಆಶಾ ಯೋಜನೆಯು ಪ್ರಯೋಜನ ಪಡೆಯುವ ಲಾಭಗಳನ್ನು ಪಡೆದುಕೊಳ್ಳುತ್ತದೆ. ಇದರ ಜೊತೆಗೆ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಅನುಮೋದಿಸಲಾದ ಇತರ ಕಾರ್ಯ-ಆಧಾರಿತ ಪ್ರೋತ್ಸಾಹಕಗಳಿಗೆ ಹೆಚ್ಚುವರಿಯಾಗಿ ಮಾಸಿಕ ಪ್ರೋತ್ಸಾಹಕ ಹೆಚ್ಚಳವಾಗುತ್ತದೆ.

ಮುಂದಿನ ವರ್ಷದ ಮಾರ್ಚ್ 31 ರೊಳಗೆ ಶೇ. 65 ರಷ್ಟು ಹಾಗೂ  ಅಕ್ಟೋಬರ್ ತಿಂಗಳೊಳಗೆ ಶೇ.100 ರಷ್ಟು  ಆಶಾ ಕಾರ್ಯಕರ್ತೆಯರನ್ನು ಸಾಮಾಜಿಕ ಸುರಕ್ಷತಾ ಯೋಜನೆಯಡಿ ನೋಂದಾಯಿಸುವ ನಿಟ್ಟಿನಲ್ಲಿ  ಈ ಪ್ಯಾಕೇಜ್ ನೀಡಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com