ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಆಯೋಜನೆಯಾಗಿದ್ದ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ನೌಕಾ ರೇಸ್ ನಲ್ಲಿ ಪಾಲ್ಗೊಂಡಿದ್ದ ಅಧಿಕಾರಿ ಅಭಿಲಾಶ್ ಟಾಮಿ, ಚಂಡಮಾರುತದ ಹೊಡೆತಕ್ಕೆ ಸಿಲುಕಿ ಪ್ರಾಣಾಪಾಯಕ್ಕೆ ಸಿಲುಕಿದ್ದರು. ಅವರ ಚಲಾಯಿಸುತ್ತಿದ್ದ ಬೋಟ್ ಸಮುದ್ರ ಮಧ್ಯೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಛಿದ್ರವಾಗಿತ್ತು. ಕೂಡಲೇ ಟಾಮಿ ಅಪಾಯದ ಸೂಚನೆ ರವಾನಿಸಿದ್ದರು. ಇದರಿಂದ ಎಚ್ಚೆತ್ತ ನೌಕಾಧಿಕಾರಿಗಲು ಅಭಿಲಾಶ್ ಟಾಮಿ ರಕ್ಷಣೆಗೆ ಕಾರ್ಯಾಚರಣೆ ಕೈಗೊಂಡಿದ್ದರು. ಟಾಮಿ ರಕ್ಷಣೆಗಾಗಿ ಭಾರತೀಯ ನೌಕಾದಳದ ನೌಕೆ ಮತ್ತು ಪಿ8ಐ ವಿಮಾನವನ್ನು ರವಾನೆ ಮಾಡಲಾಗಿತ್ತು. ಇದೀಗ ಬರೊಬ್ಬರಿ 16 ಗಂಟೆಗಳ ಬಳಿಕ ಟಾಮಿ ರಕ್ಷಣೆ ಮಾಡಲಾಗಿದ್ದು, ಛಿದ್ರಗೊಂಡ ಬೋಟ್ ನಲ್ಲಿ ಟಾಮಿ ಪ್ರಜ್ಞಾ ಸ್ಥಿತಿಯಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.