ಕಳೆದ ಆಗಸ್ಟ್ ತಿಂಗಳಿನಿಂದ ಇಬ್ಬರೂ ಒಟ್ಟಾಗಿ ಜೀವನ ನಡೆಸಲು ಪ್ರಾರಂಭಿಸಿದಾಗ ಅರುಣಾ ಪೋಷಕರು ಆಕೆಯ ವಿರುದ್ಧ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ಆಕೆಯನ್ನು ತಿರುವನಂತಪುರದ ನಯ್ಯಂತಿಕರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆಗ ನ್ಯಾಯಾಲಯ ಅರುಣಾಗೆ ತನ್ನೊಡನಿರಲು ಮುಕ್ತ ಸ್ವಾತಂತ್ರ ನೀಡಿತ್ತು,. ಆದರೂ ಆಕೆಯ ಪೋಷಕರು ಮತ್ತೆ ಅವಳನ್ನು ಬಲವಂತವಾಗಿ ಕರೆದೊಯ್ದರು ಎಂದು ಶ್ರೀಜಾ ನ್ಯಾಯಾಲಯಕ್ಕೆ ವಿವರಿಸಿದ್ದಾರೆ.