ನರಸಿಂಗ್ ಬೋದಾರ್ (75) ಎನ್ನುವ ವ್ಯಕ್ತಿ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಹಳ್ಳಿಯೊಂದರ ನಿವಾಸಿ ಈತ ತನ್ನ ಮಗ ರಾಜುವಿನ ಹೆಸರಲ್ಲಿ ಕಳೆದ ಕೆಲ ವರ್ಷಗಳಿಂದಲೂ ಅಕ್ಕಿ, ಗೋಧಿ ಸೇರಿ ಅನೇಕ ಪಡಿತರ ಸಾಮಗ್ರಿಯನ್ನು ಖರೀದಿಸುತ್ತಿದ್ದ. ಆದರೆ ಆಧಾರ್ ಆಧಾರಿತ ರೇಷನ್ ವ್ಯವಸ್ಥೆಯ ಕೆಲ ಬದಲಾವಣೆ ಹಿನ್ನೆಲೆಯಲ್ಲಿ ಸೋಮವಾರ ಪಡಿತರ ತೆಗೆದುಕೊಳ್ಳ ಹೋದ ಬೋದಾರ್ ಬಳಿ ಆತನ ಮಗ ರಾಜುವಿನ ಆಧಾರ್ ಕಾರ್ಡ್ ಮಾಹಿತಿ ಕೇಳಲಾಗಿದೆ.