ಸರಿಯಾದ ಸಮಯದಲ್ಲಿ ಪಾಸ್ಪೋರ್ಟ್ ಸಿಗದೇ ಉದ್ಯೋಗ ಕೈತಪ್ಪಿದ್ದರಿಂದ ಹತಾಶಗೊಂಡಿದ್ದ ವ್ಯಕ್ತಿಯೋರ್ವ ನೀವು ಚೌಕೀದಾರ್ ಅಲ್ಲ, ನಾಚಿಕೆಗೇಡಿ, ಅಜ್ಞಾನಿ ಸಚಿವರು. ಕೇವಲ ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳುತ್ತೀರಿ, ನಿಮ್ಮ ಹಿತಾಸಕ್ತಿಗಾಗಿ ಹಣ ಕೊಟ್ಟು ಸುದ್ದಿ ಪ್ರಕಟವಾಗುವಂತೆ ಮಾಡುತ್ತೀರಿ. ಆದರೆ 34,000 ರೂಪಾಯಿ ವೇತನ ಪಡೆಯುತ್ತಿದ್ದ ಸಾಮಾನ್ಯ ವ್ಯಕ್ತಿ ನಾನು ಪಾಸ್ಪೋರ್ಟ್ ಸೂಕ್ತ ಸಮಯಕ್ಕೆ ಸಿಗದ ಕಾರಣ ಉತ್ತಮ ಉದ್ಯೋಗ ಅವಕಾಶವನ್ನು ತಪ್ಪಿಸಿಕೊಂಡೆ. ಈಗಲೂ ಪಾಸ್ಪೋರ್ಟ್ ಹಾಗೂ ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದ್ದೀನಿ ಎಂದು ಟ್ವಿಟರ್ ನಲ್ಲಿ ಸುಷ್ಮಾ ಸ್ವರಾಜ್ ಅವರನ್ನು ಟ್ಯಾಗ್ ಮಾಡಿ ಹೇಳಿದ್ದ.