ವಿರೋಧಿಗಳಿಗೆ ಸೆಡ್ಡು ಹೊಡೆಯಲು ಬಿಜೆಪಿ ಪರ ಅಭಿಯಾನ ಆರಂಭಿಸಿದ ಕಲಾವಿದರೂ, ಮೋದಿಗೆ ಸಿಕ್ಕ ಬೆಂಬಲ?

ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ರಂಗಭೂಮಿ ಕಲಾವಿದರರು ಅಭಿಮಾನ ಆರಂಭಿಸಿದ್ದು...
ಅಮೋಲ್ ಪಾಲೇಕರ್, ನಾಸಿರುದ್ದೀನ್ ಶಾ ಹಾಗೂ ಗಿರೀಶ್ ಕಾರ್ನಾಡ್
ಅಮೋಲ್ ಪಾಲೇಕರ್, ನಾಸಿರುದ್ದೀನ್ ಶಾ ಹಾಗೂ ಗಿರೀಶ್ ಕಾರ್ನಾಡ್
Updated on
ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ರಂಗಭೂಮಿ ಕಲಾವಿದರರು ಅಭಿಮಾನ ಆರಂಭಿಸಿದ್ದು ಇದರಲ್ಲಿ ವಿರೋಧಗಿಂತ ಬಿಜೆಪಿ ಪರವಾಗಿ ಮತ ಚಲಾಯಿಸಿರುವವರ ಸಂಖ್ಯೆ ಹೆಚ್ಚಾಗಿದೆ.
ಪಂಡಿತ್ ಜಾಸ್ ರಾಜ್, ವಿವೇಕ್ ಒಬರಾಯ್ ಮತ್ತು ರಿಟಾ ಗಂಗೂಲಿ ಸೇರಿದಂತೆ 900ಕ್ಕೂ ಹೆಚ್ಚು ಕಲಾವಿದರೂ ಬಿಜೆಪಿ ಪರ ಅಭಿಯಾನ ಆರಂಭಿಸಿದ್ದು ನಮಗೆ ಮಜಬೂತ್ ಸರ್ಕಾರ ಬೇಕೇ ಹೊರತು ಮಜಬೂರ್ ಸರ್ಕಾರ ಬೇಡ ಎಂದು ಹೇಳಿದ್ದಾರೆ.
ಕಲಾವಿದರೂ ಜನರಿಗೆ ಯಾವುದೇ ಒತ್ತಡ ಹಾಗೂ ಪೂರ್ವಗ್ರಹ ಪೀಡಿತರಾಗಿ ಮತ ಚಲಾಯಿಸಬೇಡಿ. ನಮ್ಮ ದೇಶಕ್ಕೆ ಬಲಿಷ್ಠ ಪ್ರಧಾನಿ ಬೇಕು. ಭಯೋತ್ಪಾದನೆಯನ್ನು ನಿಗ್ರಹಿಸಬೇಕಾದರೇ ನಮಗೆ ಮಜಬೂತ್ ಸರ್ಕಾರ ಬೇಕು ಎಂದು ಹೇಳಿದ್ದಾರೆ. 
ಈ ಹಿಂದೆ 600ಕ್ಕೂ ಹೆಚ್ಚು ಕಲಾವಿದರೂ ಅಭಿಯಾನ ಪ್ರಾರಂಭಿಸಿದ್ದ ಗಿರೀಶ್ ಕಾರ್ನಾಡ್, ಅರುಂಧತಿ ರಾಯ್, ಅಮೋಲ್ ಪಾಲೇಕರ್, ನಾಸೀರುದ್ದೀನ್ ಶಾ ಮತ್ತು ಉಶಾ ಗಂಗೂಲಿ ಸೇರಿದಂತೆ ಹಲವು ಕಲಾವಿದರು ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com