ಕಾಂಗ್ರೆಸ್ ನೀಡಿದ್ದ ಅಧಿಕಾರ ನಿರ್ವಹಿಸುವಲ್ಲಿ ಅಲ್ಪೇಶ್ ವಿಫಲ: ಹಾರ್ದಿಕ್ ಪಟೇಲ್

ಕಾಂಗ್ರೆಸ್ ತೊರೆದಿದ್ದ ಅಲ್ಪೇಶ್ ಠಾಕೂರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಹಾರ್ದಿಕ್ ಪಟೇಲ್, ಕಾಂಗ್ರೆಸ್ ನೀಡಿದ್ದ ಅಧಿಕಾರ ಹಾಗೂ ಗೌರವವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನೀಡಿದ್ದ ಅಧಿಕಾರ ನಿರ್ವಹಿಸುವಲ್ಲಿ ಅಲ್ಪೇಶ್ ವಿಫಲ: ಹಾರ್ದಿಕ್ ಪಟೇಲ್
ಕಾಂಗ್ರೆಸ್ ನೀಡಿದ್ದ ಅಧಿಕಾರ ನಿರ್ವಹಿಸುವಲ್ಲಿ ಅಲ್ಪೇಶ್ ವಿಫಲ: ಹಾರ್ದಿಕ್ ಪಟೇಲ್
Updated on
ಅಹ್ಮದಾಬಾದ್: ಕಾಂಗ್ರೆಸ್ ತೊರೆದಿದ್ದ ಅಲ್ಪೇಶ್ ಠಾಕೂರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಹಾರ್ದಿಕ್ ಪಟೇಲ್, ಕಾಂಗ್ರೆಸ್ ನೀಡಿದ್ದ ಅಧಿಕಾರ ಹಾಗೂ ಗೌರವವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ. 
ಕಾಂಗ್ರೆಸ್ ಪಕ್ಷ ನೀಡಿದ್ದ ಅಧಿಕಾರ ಹಾಗೂ ಗೌರವವನ್ನು ನಿರ್ವಹಿಸುವುದಕ್ಕೆ ಸಾಧ್ಯವಾಗದ ಅಲ್ಪೇಶ್ ಠಾಕೂರ್, ಆಟ ಆಡಲು ಪ್ರಾರಂಭಿಸಿದರು ಎಂದು ಹಾರ್ದಿಕ್ ಆರೋಪಿಸಿದ್ದಾರೆ. 2017 ರ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಅಲ್ಪೇಶ್ ಠಾಕೂರ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಇದೇ ವೇಳೆ ಬಿಜೆಪಿ ವಿರುದ್ಧವೂ ಹರಿಹಾಯ್ದಿರುವ ಹಾರ್ದಿಕ್ ಪಟೇಲ್, ತಮ್ಮನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವುದಕ್ಕೆ ಬಿಜೆಪಿ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ ಎಂದು ಆರೋಪ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com