ತನ್ನ ಪ್ರಾಣ ನೀಡಿ ನಾಗರ ಹಾವಿನಿಂದ ಮಾಲಿಕನ ಪ್ರಾಣ ಉಳಿಸಿದ ನಾಯಿ!

ಮಾಲಿಕನ ಪ್ರಾಣ ಉಳಿಸುವುದಕ್ಕಾಗಿ, ನಾಗರ ಹಾವಿನ ವಿರುದ್ಧ ಹೋರಾಡಿದ ನಾಯಿ ಕೊನೆಗೆ ತನ್ನ ಪ್ರಾಣವನ್ನು ನೀಡಿರುವ ಘಟನೆ ತಂಜಾವೂರಿನಲ್ಲಿ ನಡೆದಿದೆ.
ತನ್ನ ಪ್ರಾಣ ನೀಡಿ ನಾಗರ ಹಾವಿನಿಂದ ಮಾಲಿಕನ ಪ್ರಾಣ ಉಳಿಸಿದ ನಾಯಿ!
ತನ್ನ ಪ್ರಾಣ ನೀಡಿ ನಾಗರ ಹಾವಿನಿಂದ ಮಾಲಿಕನ ಪ್ರಾಣ ಉಳಿಸಿದ ನಾಯಿ!
Updated on
ತಂಜಾವೂರು: ಮಾಲಿಕನ ಪ್ರಾಣ ಉಳಿಸುವುದಕ್ಕಾಗಿ, ನಾಗರ ಹಾವಿನ ವಿರುದ್ಧ ಹೋರಾಡಿದ ನಾಯಿ ಕೊನೆಗೆ ತನ್ನ ಪ್ರಾಣವನ್ನು ನೀಡಿರುವ ಘಟನೆ ತಂಜಾವೂರಿನಲ್ಲಿ ನಡೆದಿದೆ.
ಜಮೀನಿನಿಂದ ವಾಪಸ್ಸಾಗುತ್ತಿದ್ದ ವೇಳೆ 5 ಅಡಿ ಉದ್ದದ ನಾಗರ ಹಾವು ತನ್ನ ಮಾಲಿಕ ನಟರಾಜನ್ (50) ಮೇಲೆ ದಾಳಿ ನಡೆಸಲು ಸಿದ್ಧಗೊಂಡಿದ್ದನ್ನು ಗಮನಿಸಿದ ನಾಯಿ ಪಪ್ಪಿ ನಾಗರ ಹಾವಿನ ಮೇಲೆ ದಾಳಿ ನಡೆಸಿದೆ. ನಟರಾಜನ್ ಹತ್ತಿರದಲ್ಲೇ ಇದ್ದ ಮನೆಗೆ ಹೋಗಿ ಹಾವನ್ನು ಓಡಿಸಲು ಕೋಲನ್ನು ತರುವ ವೇಳೆಗೆ ನಾಯಿ ಹಾವನ್ನು ಕೊಂದಿತ್ತು. ಆದರೆ ಹಾವಿನಿಂದ ಕಚ್ಚಿಸಿಕೊಂಡಿದ್ದರ ಪರಿಣಾಮವಾಗಿ ನಾಯಿ ಕೂಡ ಸಾವನ್ನಪ್ಪಿದೆ. 
ತನ್ನ ಪ್ರಾಣ ನೀಡಿ ಮಾಲಿಕನನ್ನು ರಕ್ಷಿಸಿದ ನಾಯಿ ಪಪ್ಪಿಯನ್ನು ನೋಡಲು ಗ್ರಾಮಸ್ಥರು ಧಾವಿಸಿದ್ದು ನಿಯತ್ತಿನ ಪ್ರಾಣಿಯ ಪ್ರಾಣಾರ್ಪಣೆಗೆ ಕಂಬನಿ ಮಿಡಿದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com