ಅಣೆಕಟ್ಟು ಸುರಕ್ಷತಾ ಮಸೂದೆ 2019 ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಈ ಮಸೂದೆ ಮೂಲಕ ರಾಜ್ಯಗಳ ಅಧಿಕಾರವನ್ನು ಕಸಿಯುವ ಉದ್ದೇಶವಿಲ್ಲಾ, ನೀರು ರಾಜ್ಯಗಳ ವಿಚಾರವಾಗಿದೆ. 2016ರಲ್ಲಿ ಈ ಮಸೂದೆ ಬಗ್ಗೆ ರಾಜ್ಯಗಳೊಂದಿಗೆ ಸಮಾಲೋಚಿಸಲಾಗಿದ್ದು, 2010ರ ಕರಡು ಗಿಂತಲೂ ಈ ಮಸೂದೆ ಉತ್ತಮ ಎಂದು ಬಹುತೇಕ ರಾಜ್ಯಗಳು ಒಪ್ಪಿವೆ ಎಂದರು.