ಪಶ್ಚಿಮ ಬಂಗಾಳ: ತೃಣಮೂಲ ಕಾಂಗ್ರೆಸ್ ಗೆ ಆತಂಕ ಮೂಡಿಸಿದ ಅಮಿತ್ ಶಾ ಪತ್ರ! 

ಕೇಂದ್ರ ಗೃಹ ಸಚಿವ ಅಮಿತ್ ಶಾ  ಡಾರ್ಜಿಲಿಂಗ್ ಸಂಸದ ರಾಜ್ಯ್ ಬಿಸ್ತಾ ಗೆ ಬರೆದ ಪತ್ರಕ್ಕೆ ತೃಣಮೂಲ ಕಾಂಗ್ರೆಸ್ ತೀವ್ರ ಆತಂಕ ವ್ಯಕ್ತಪಡಿಸಿದೆ. 
ಪಶ್ಚಿಮ ಬಂಗಾಳ: ತೃಣಮೂಲ ಕಾಂಗ್ರೆಸ್ ಗೆ ಆತಂಕ ಮೂಡಿಸಿದ ಅಮಿತ್ ಶಾ ಪತ್ರ! 
Updated on

ಕೇಂದ್ರ ಗೃಹ ಸಚಿವ ಅಮಿತ್ ಶಾ  ಡಾರ್ಜಿಲಿಂಗ್ ಸಂಸದ ರಾಜ್ಯ್ ಬಿಸ್ತಾ ಗೆ ಬರೆದ ಪತ್ರಕ್ಕೆ ತೃಣಮೂಲ ಕಾಂಗ್ರೆಸ್ ತೀವ್ರ ಆತಂಕ ವ್ಯಕ್ತಪಡಿಸಿದೆ. 

ರಾಷ್ಟ್ರೀಯ ರಾಜಧಾನಿಯಲ್ಲಿ ಗೋರ್ಖಾಗಳಿಗೆ ಭದ್ರತೆಗೆ ಆಗ್ರಹಿಸಿ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದ ಅಮಿತ್ ಶಾ, ಗೋರ್ಖಾ ಲ್ಯಾಂಡ್ ಹಾಗೂ ಲಡಾಕ್ ನ ಭಾಗದ ಜನತೆಯ ಕುರಿತ ನಿಮ್ಮ ಆತಂಕಗಳ ಬಗ್ಗೆ ಗಮನ ಹರಿಸುತ್ತೇವೆ ಎಂದು ಹೇಳಿದ್ದರು. ಪತ್ರದಲ್ಲಿ ಗೋರ್ಖಾ ಲ್ಯಾಂಡ್ ಎಂಬ ಶಬ್ದ ಪ್ರಯೋಗಕ್ಕೆ ಟಿಎಂಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪಶ್ಚಿಮ ಬಂಗಾಳವನ್ನು ಬಿಜೆಪಿ ಇಬ್ಭಾಗ ಮಾಡುವುದಕ್ಕೆ ಯತ್ನಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.

ಪಶ್ಚಿಮ ಬಂಗಾಳದಲ್ಲಿ ಎಲ್ಲಿಯೂ ಗೋರ್ಖಾ ಲ್ಯಾಂಡ್ ಎಂಬ ಪ್ರದೇಶವಿಲ್ಲ. ಜಮ್ಮು-ಕಾಶ್ಮೀರದ ಮಾದರಿಯಲ್ಲಿ ಪಶ್ಚಿಮ ಬಂಗಾಳವನ್ನೂ ಇಬ್ಭಾಗ ಮಾಡಲು ಬಿಜೆಪಿ ಯತ್ನಿಸುತ್ತಿದೆ, ಆದರೆ ಇಲ್ಲಿ ಇರುವುದು ಟಿಎಂಸಿ ಯಾರಿಗೂ ರಾಜ್ಯವನ್ನು ವಿಭಜನೆ ಮಾಡಲು ಬಿಡುವುದಿಲ್ಲ ಎಂದು ಪಕ್ಷದ ನಾಯಕ ಗೌತಮ್ ದೇವ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com