ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್​ ಗೆ ಆ.15 ರಂದು ವೀರ ಚಕ್ರ ಪ್ರಶಸ್ತಿ ಪ್ರದಾನ

ಯೋಧ ಅಭಿನಂದನ್ ವರ್ತಮಾನ್ ಗೆ ಆ.15 ರಂದು ವೀರ ಚಕ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 
ಅಭಿನಂದನ್
ಅಭಿನಂದನ್
Updated on

ನವದೆಹಲಿ: ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರದ ಬೆಳವಣಿಗೆಯಲ್ಲಿ ಪಾಕಿಸ್ತಾನ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ ಭಾರತಕ್ಕೆ ವಾಪಸ್ಸಾಗಿದ್ದ ಯೋಧ ಅಭಿನಂದನ್ ವರ್ತಮಾನ್ ಗೆ ಆ.15 ರಂದು ವೀರ ಚಕ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 

ಫೆ.27 ರಂದು ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಮಿಗ್-21 ನ್ನು ಹೊಡೆದುರುಳಿಸಿ ಅಪಾಯ ಸನ್ನಿವೇಶವನ್ನು ಎದುರಿಸಿ ಪಾರಾಗಿ ಬಂದಿದ್ದರು. ಹಳೆಯ ಮಿಗ್-21 ಯುದ್ಧವಿಮಾನದಿಂದ ಅತ್ಯಾಧುನಿಕ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದ ಅಭಿನಂದನ್ ಸಾಹಸಕ್ಕೆ ತಜ್ಞರು ಬೆರಗಾಗಿದ್ದರು. ಪರಮ ವೀರ ಚಕ್ರ, ಮಹಾ ವೀರ ಚಕ್ರದ ನಂತರ ಯೋಧರ ಸಾಹಸ, ಶೌರ್ಯಗಳನ್ನು ಗುರುತಿಸಿ ನೀಡಲಾಗುವ 3ನೇ ಅತಿ ಶ್ರೇಷ್ಠ ಪ್ರಶಸ್ತಿ ವೀರ ಚಕ್ರವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com