ಅನಜ್ ಮಂಡಿ ಅವಘಡ: ಅಗ್ನಿ ಶಾಮಕ ದಳಕ್ಕೆ ಅಷ್ಟೊಂದು ಜನ ಸಿಲುಕಿದ್ದರ ಬಗ್ಗೆ ಅರಿವಿರಲಿಲ್ಲ!

ದೆಹಲಿಯ ಅನಜ್ ಮಂಡಿ ಅವಘಡದಲ್ಲಿ 43 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 1997 ರಲ್ಲಿ ಸಂಭವಿಸಿದ್ದ ಉಪಹಾರ್ ಸಿನಿಮಾ ಅಗ್ನಿ ದುರಂತದ ನಂತರದಲ್ಲಿ ಅತಿ ದೊಡ್ಡ ಅಗ್ನಿ ದುರಂತ ಇದಾಗಿದೆ. 
ಅನಜ್ ಮಂಡಿ ಅವಘಡ: ಅಗ್ನಿ ಶಾಮಕ ದಳಕ್ಕೆ ಅಷ್ಟೊಂದು ಜನ ಸಿಲುಕಿದ್ದರ ಬಗ್ಗೆ ಅರಿವಿರಲಿಲ್ಲ!
ಅನಜ್ ಮಂಡಿ ಅವಘಡ: ಅಗ್ನಿ ಶಾಮಕ ದಳಕ್ಕೆ ಅಷ್ಟೊಂದು ಜನ ಸಿಲುಕಿದ್ದರ ಬಗ್ಗೆ ಅರಿವಿರಲಿಲ್ಲ!
Updated on

ದೆಹಲಿ: ದೆಹಲಿಯ ಅನಜ್ ಮಂಡಿ ಅವಘಡದಲ್ಲಿ 43 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 1997 ರಲ್ಲಿ ಸಂಭವಿಸಿದ್ದ ಉಪಹಾರ್ ಸಿನಿಮಾ ಅಗ್ನಿ ದುರಂತದ ನಂತರದಲ್ಲಿ ಅತಿ ದೊಡ್ಡ ಅಗ್ನಿ ದುರಂತ ಇದಾಗಿದೆ. 

ಅಗ್ನಿ ಶಾಮಕ ವಿಭಾಗೀಯ ಅಧಿಕಾರಿ ಈ ಪ್ರಕರಣದ ರಕ್ಷಣಾ ಕಾರ್ಯಾಚರಣೆ ಕುರಿತು ಕೆಲವೊಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಫೈರ್ ಫೈಟರ್ ಗಳು ಸ್ಥಳಕ್ಕೆ ಆಗಮಿಸುತ್ತುದ್ದಂತೆಯೇ ಅವರಿಗೆ 4 ಅಂತಸ್ತಿನ ಕಟ್ಟಡದಲ್ಲಿ ಈ ಪರಿಪ್ರಮಾಣದಲ್ಲಿ ಜನ ಸಿಲುಕಿಕೊಂಡಿರುವ ಅಂದಾಜು ಅಥವಾ ಅರಿವು ಇರಲಿಲ್ಲವಂತೆ. 

ಕಟ್ಟಡದಲ್ಲಿ ಆವರಿಸಿಕೊಂಡಿದ್ದ ಹೊಗೆಯ ನಡುವೆಯೇ ಮೊದಲ ಮಹಡಿಗೆ ರಕ್ಷಣಾ ಕಾರ್ಯಾಚರಣೆಗೆಂದು ಹೋದವರಿಗೆ ತಕ್ಷಣವೇ 2 ನೇ ಮಹಡಿಯಿಂದಲೂ ರಕ್ಷಣೆಗಾಗಿ ಕರೆ ಬಂದಿದೆ. ಅಲ್ಲಿ ಸಿಲುಕಿಕೊಂಡಿರುವುದು ಒಬ್ಬನೇ ವ್ಯಕ್ತಿ ಎಂದುಕೊಂಡ ಅಗ್ನಿಶಾಮಕ ಸಿಬ್ಬಂದಿಗೆ ಹಲವು ಮಂದಿ ಅಲ್ಲಿ ಸಿಲುಕಿಕೊಂಡು ರಕ್ಷಣೆಗೆ ಮೊರೆ ಇಡುತ್ತಿರುವುದು ಗೋಚರವಾಗಿದೆ. 

ಹೆಚ್ಚುವರಿ ವಿಭಾಗೀಯ ಅಧಿಕಾರಿ ರಾಜೇಶ್ ಶುಕ್ಲಾ 10-12 ಜನರನ್ನು ರಕ್ಷಣೆ ಮಾಡುವ ವೇಳೆಗೆ 2 ನೇ ಮಹಡಿಯ ಮತ್ತೊಂದು ಕೊಠಡಿಯಲ್ಲಿ 30 ಕ್ಕೂ ಹೆಚ್ಚು ಜನರು ಸಿಲುಕಿರುವುದು ಕಂಡುಬಂದಿದೆ. ಇಡಿಯ ಕಟ್ಟಡ ದಟ್ಟ ಹೊಗೆಯಿಂದ ಆವೃತವಾಗಿದ್ದ ಕಾರಣ ರಕ್ಷಣಾ ಕಾರ್ಯಾಚರಣೆ ಕಷ್ಟ ಸಾಧ್ಯವಾಯಿತು ಎಂದು ರಾಜೇಶ್ ಶುಕ್ಲಾ ಹೇಳಿದ್ದಾರೆ.
 
"ಉಸಿರಾಟದ ಉಪಕರಣಗಳನ್ನು ಹೊತ್ತು 2 ನೇ ಬಾರಿಗೆ ರಕ್ಷಣಾ ಕಾರ್ಯಾಚರಣೆಗೆ ಹೋದೆ, ಈ ವೇಳೆಗೆ ಆಗಲೆ ಬೆಂಕಿಯ ಕೆನ್ನಾಲಗೆ ಮತ್ತಷ್ಟು ವ್ಯಾಪಿಸಿತ್ತು. ಹೆಚ್ಚುವರಿ ತಂಡಗಳನ್ನೂ ರಕ್ಷಣಾ ಕಾರ್ಯಾಚರಣೆಗೆ ಕಳಿಸಲಾಗಿತ್ತು. ಆದರೆ ಉಸಿರಾಟದ ಉಪಕರಣ ಸಂಪೂರ್ಣವಾಗಿ ಬಳಕೆಯಾದ್ದರಿಂದ ನಾನು ಕೆಳಗೆಯೇ ಉಳಿಯಬೇಕಾಯಿತು ಎಂದು ರಾಜೇಶ್ ಶುಕ್ಲಾ ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com